ನಟ, ದಿವಂಗತ ಪುನೀತ್ ರಾಜ್ಕುಮಾರ್ ಅವರ ಜನ್ಮದಿನದಂದೇ ಚಿತ್ರ ರಿಲೀಸ್ ಮಾಡುವುದಕ್ಕೂ ಕಾರಣ ಇದೆ ಎಂದಿದ್ದಾರೆ ನಿರ್ದೇಶಕ ಆರ್.ಚಂದ್ರು. ‘ನಾವು ಬಿಡುಗಡೆ ಮಾಡಿದ್ದ ಕಬ್ಜ ಚಿತ್ರದ ಮೊದಲ ಪೋಸ್ಟರ್ ನೋಡಿಯೇ ಪುನೀತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಚಿತ್ರೀಕರಣದ ಸೆಟ್ಗೂ ಭೇಟಿ ನೀಡಿದ್ದರು. ಈ ಚಿತ್ರಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದರು. ಈ ಎಲ್ಲ ಕಾರಣಗಳಿಂದ ಅವರ ಜನ್ಮದಿನದಂದೇ, ಅವರ ನೆನಪಿನಲ್ಲಿ, ಅಪ್ಪು ಅವರನ್ನು ಮತ್ತೆ ಮತ್ತೆ ಸಂಭ್ರಮಿಸಲು ಈ ದಿನಾಂಕವನ್ನು ಆಯ್ಕೆ ಮಾಡಿದೆವು.