<p><strong>ಬೆಂಗಳೂರು</strong>: ನಟ ನಿರ್ದೇಶಕ ರಿಷಭ್ ಶೆಟ್ಟಿ ಅವರ ಕಾಂತಾರ ಸಿನಿಮಾ ಅದ್ಭುತ ಯಶಸ್ಸು ಕಂಡು ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ.</p>.<p>ರಜನಿಕಾಂತ್ ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ದಿಗ್ಗಜರು ಕಾಂತಾರ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಅದೇ ರೀತಿ ನಟ ಕಮಲ್ ಹಾಸನ್ ಅವರು ಕೂಡ ರಿಷಭ್ ಶೆಟ್ಟಿ ಅವರಿಗೆ ಪತ್ರ ಬರೆದು ಕಾಂತಾರ ಸಿನಿಮಾ ಬಗ್ಗೆ ಪ್ರಶಂಷೆ ನೀಡಿದ್ದಾರೆ.</p>.<p>ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡು ರಿಷಭ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.</p>.<p>‘ನಾನು ಸಹಜವಾಗಿ ದೇವರನ್ನು ನಂಬುವುದಿಲ್ಲ. ಆದರೆ, ಅದರ ಅವಶ್ಯಕತೆಯನ್ನು ಅರ್ಥಮಾಡಿಕೊಂಡಿದ್ದೇನೆ. ನಿಮ್ಮ ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ದೇವರು ತಾಯಿಯಂತೆ ವರ್ತಿಸುವುದನ್ನು ಕಂಡೆ. ಇದು ದ್ರಾವಿಡ ಸಂಸ್ಕೃತಿಯ ಪ್ರತೀಕ, ಅದ್ಭುತ’ ಎಂದು ಬಣ್ಣಿಸಿದ್ದಾರೆ.</p>.<p>‘ಒಂದು ಸುಂದರ ಕಲಾಕೃತಿಯು ಶ್ರೇಷ್ಠತೆಯ ಸ್ಥಾನಮಾನವನ್ನು ಹೇಗೆ ಹೊಂದುತ್ತದೆ ಎಂಬುದು ಕಾಂತಾರ ಸಿನಿಮಾದಿಂದ ಸಾಬೀತಾಗಿದೆ. ಸಿನಿಮಾದಲ್ಲಿ ಕ್ಲಾಸಿಕ್ ಛಾಯೆ ದಟ್ಟವಾಗಿದೆ. ದಕ್ಷಿಣ ಭಾರತ ಚಿತ್ರರಂಗದ ಶ್ರೇಷ್ಠತೆಯನ್ನು ನೀವು ಮುಂದೆ ಕೊಂಡೊಯ್ಯುತ್ತಿರಿ’ ಎಂದು ಕಮಲ್ ಹೇಳಿದ್ದಾರೆ.</p>.<p>‘ಅರ್ಹ ವ್ಯಕ್ತಿಗಳಿಗೆ ಅದೃಷ್ಠ ಎಂಬುದೇ ಇಲ್ಲ. ನಿಮ್ಮ ಮುಂದಿನ ಸಿನಿಮಾ ನಿಮ್ಮದೇ ಕಾಂತಾರ ಸಿನಿಮಾದ ದಾಖಲೆಯನ್ನು ಮುರಿಯುವಂತಾಗಲಿ’ ಎಂದು ಶುಭಕೋರಿದ್ದಾರೆ.</p>.<p><a href="https://www.prajavani.net/entertainment/cinema/rakhi-sawants-husband-adil-khan-durrani-makes-an-official-announcement-about-their-wedding-1006686.html" itemprop="url">ರಾಖಿ ಸಾವಂತ್ ಜೊತೆ ಮದುವೆ ಆಗಿರುವುದನ್ನು ಖಚಿತಪಡಿಸಿದ ಮೈಸೂರು ಮೂಲದ ಉದ್ಯಮಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಟ ನಿರ್ದೇಶಕ ರಿಷಭ್ ಶೆಟ್ಟಿ ಅವರ ಕಾಂತಾರ ಸಿನಿಮಾ ಅದ್ಭುತ ಯಶಸ್ಸು ಕಂಡು ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ.</p>.<p>ರಜನಿಕಾಂತ್ ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ದಿಗ್ಗಜರು ಕಾಂತಾರ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಅದೇ ರೀತಿ ನಟ ಕಮಲ್ ಹಾಸನ್ ಅವರು ಕೂಡ ರಿಷಭ್ ಶೆಟ್ಟಿ ಅವರಿಗೆ ಪತ್ರ ಬರೆದು ಕಾಂತಾರ ಸಿನಿಮಾ ಬಗ್ಗೆ ಪ್ರಶಂಷೆ ನೀಡಿದ್ದಾರೆ.</p>.<p>ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡು ರಿಷಭ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.</p>.<p>‘ನಾನು ಸಹಜವಾಗಿ ದೇವರನ್ನು ನಂಬುವುದಿಲ್ಲ. ಆದರೆ, ಅದರ ಅವಶ್ಯಕತೆಯನ್ನು ಅರ್ಥಮಾಡಿಕೊಂಡಿದ್ದೇನೆ. ನಿಮ್ಮ ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ದೇವರು ತಾಯಿಯಂತೆ ವರ್ತಿಸುವುದನ್ನು ಕಂಡೆ. ಇದು ದ್ರಾವಿಡ ಸಂಸ್ಕೃತಿಯ ಪ್ರತೀಕ, ಅದ್ಭುತ’ ಎಂದು ಬಣ್ಣಿಸಿದ್ದಾರೆ.</p>.<p>‘ಒಂದು ಸುಂದರ ಕಲಾಕೃತಿಯು ಶ್ರೇಷ್ಠತೆಯ ಸ್ಥಾನಮಾನವನ್ನು ಹೇಗೆ ಹೊಂದುತ್ತದೆ ಎಂಬುದು ಕಾಂತಾರ ಸಿನಿಮಾದಿಂದ ಸಾಬೀತಾಗಿದೆ. ಸಿನಿಮಾದಲ್ಲಿ ಕ್ಲಾಸಿಕ್ ಛಾಯೆ ದಟ್ಟವಾಗಿದೆ. ದಕ್ಷಿಣ ಭಾರತ ಚಿತ್ರರಂಗದ ಶ್ರೇಷ್ಠತೆಯನ್ನು ನೀವು ಮುಂದೆ ಕೊಂಡೊಯ್ಯುತ್ತಿರಿ’ ಎಂದು ಕಮಲ್ ಹೇಳಿದ್ದಾರೆ.</p>.<p>‘ಅರ್ಹ ವ್ಯಕ್ತಿಗಳಿಗೆ ಅದೃಷ್ಠ ಎಂಬುದೇ ಇಲ್ಲ. ನಿಮ್ಮ ಮುಂದಿನ ಸಿನಿಮಾ ನಿಮ್ಮದೇ ಕಾಂತಾರ ಸಿನಿಮಾದ ದಾಖಲೆಯನ್ನು ಮುರಿಯುವಂತಾಗಲಿ’ ಎಂದು ಶುಭಕೋರಿದ್ದಾರೆ.</p>.<p><a href="https://www.prajavani.net/entertainment/cinema/rakhi-sawants-husband-adil-khan-durrani-makes-an-official-announcement-about-their-wedding-1006686.html" itemprop="url">ರಾಖಿ ಸಾವಂತ್ ಜೊತೆ ಮದುವೆ ಆಗಿರುವುದನ್ನು ಖಚಿತಪಡಿಸಿದ ಮೈಸೂರು ಮೂಲದ ಉದ್ಯಮಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>