ನಿರ್ದೇಶಕ ರಾಜ್ ಪತ್ತಿಪಾಟಿ ಮತ್ತು ವಿಕಾಸ್ ಕಾಂಬಿನೇಷನ್ನಡಿ ನಿರ್ಮಾಣವಾಗಿರುವ ‘ಕಾಣದಂತೆ ಮಾಯವಾದನು’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೊಲೆಯಾದ ನಾಯಕನ ಆತ್ಮ ದುಷ್ಕರ್ಮಿಗಳ ವಿರುದ್ಧ ಹೇಗೆಲ್ಲಾ ಸೆಣಸಾಟ ನಡೆಸುತ್ತದೆ ಎಂಬುದೇ ಇದರ ಕಥಾಹಂದರ. ರಾಜ್ ಪತ್ತಿಪಾಟಿ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.