‘ಬಿಚ್ಚುಗತ್ತಿ ಚಾಪ್ಟರ್ 1’ ಚಿತ್ರದುರ್ಗದ ಅಪ್ರತಿಮ ವೀರ ಭರಮಣ್ಣ ನಾಯಕನ ಕಥೆ ಆಧರಿಸಿದ ಐತಿಹಾಸಿಕ ಚಿತ್ರ. ‘ಅಲೆಮಾರಿ’, ‘ವಿಕ್ಟರಿ 2’ ಮತ್ತು ‘ಕಾಲೇಜ್ಕುಮಾರ್’ ಚಿತ್ರಗಳನ್ನು ನಿರ್ದೇಶಿಸಿದ್ದ ಹರಿ ಸಂತೋಷ್ ಅವರೇ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.