<p><strong>ಮುಂಬೈ</strong>: ನಿರ್ದೇಶಕ ಕರಣ್ ಜೋಹರ್ಗೆ ವಿವಾದಗಳೇನೂ ಹೊಸದಲ್ಲ. ಈ ಹಿಂದೆ ಕಾಫಿ ವಿತ್ ಕರಣ್, ಎಐಬಿ ರೋಸ್ಟ್ ಹಾಗೂ ಬಿಗ್ ಬಾಸ್(ಒಟಿಟಿ) ಶೋಗಳಲ್ಲಿ ಅವರು ನೀಡಿರುವ ಹೇಳಿಕೆಗಳು ವಿವಾದದ ಕಿಡಿಗಳನ್ನೇ ಹೊತ್ತಿಸಿದ್ದವು. ಆದರೆ, ಬಾಲಿವುಡ್ನ ಖ್ಯಾತ ನಿರ್ಮಾಪಕರೂ ಆಗಿರುವ ಕರಣ್ ಜೋಹರ್ ಇನ್ನು ಮುಂದೆ ವಿವಾದಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.</p>.<p>ಈ ಕುರಿತು ಫಿಲ್ಮ್ ಕಂಪ್ಯಾನಿಯನ್ ಜೊತೆ ಬುಧವಾರ ಮಾತನಾಡಿರುವ ಅವರು, 'ನನ್ನ ತಲೆಯಲ್ಲಿ ಹಲವು ವಿಚಾರಗಳು ಓಡುತ್ತವೆ. ಆದರೆ, ಅವುಗಳನ್ನು ಹೇಳಲು ನಾನು ಬಯಸುತ್ತಿಲ್ಲ. ಕಾರಣ, ನಾನು ನಿರ್ಬಂಧಕ್ಕೆ ಒಳಗಾಗಿದ್ದೇನೆ' ಎಂದು ತಿಳಿಸಿದ್ದಾರೆ.</p>.<p>'ನಿರ್ಬಂಧಕ್ಕೆ ಒಳಗಾಗಿರುವುದು ಬೇರೆ ಯಾವುದೇ ಕಾರಣಕ್ಕಾಗಿ ಅಲ್ಲ. ಈ ಹಿಂದಿನ ನನ್ನ ಹೇಳಿಕೆಗಳು ಬೇರೆಯವರ ಮನಸ್ಸಿಗೆ ನೋವು ಮಾಡಿವೆ. ಇದು ನನಗೀಗ ಬೇಡವಾಗಿದೆ' ಎಂದು ಕರಣ್ ಹೇಳಿದ್ದಾರೆ.</p>.<p>'ಇನ್ನು ಮುಂದೆ ಕೇವಲ ಚಿತ್ರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ನನ್ನ ಶಕ್ತಿಯನ್ನು ವ್ಯಯಿಸಲು ಬಯಸುತ್ತೇನೆ. ನಾನು ಹೇಳಲು ಬಯಸುವ ಬಹಳಷ್ಟು ವಿಚಾರಗಳಿಗೆ ತಡೆಯೊಡ್ಡಲಿದ್ದೇನೆ. ಇದು ನನಗೆ ನೋವಿನ ಸಂಗತಿಯೂ ಹೌದು' ಎಂದು ಕರಣ್ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾಗಲಿರುವ 'ಒನ್ ಮೈಕ್ ಸ್ಟ್ಯಾಂಡ್: ಸೀಸನ್ 2' ನಲ್ಲಿ ಕರಣ್ ಕಾಣಿಸಿಕೊಳ್ಳಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ನಿರ್ದೇಶಕ ಕರಣ್ ಜೋಹರ್ಗೆ ವಿವಾದಗಳೇನೂ ಹೊಸದಲ್ಲ. ಈ ಹಿಂದೆ ಕಾಫಿ ವಿತ್ ಕರಣ್, ಎಐಬಿ ರೋಸ್ಟ್ ಹಾಗೂ ಬಿಗ್ ಬಾಸ್(ಒಟಿಟಿ) ಶೋಗಳಲ್ಲಿ ಅವರು ನೀಡಿರುವ ಹೇಳಿಕೆಗಳು ವಿವಾದದ ಕಿಡಿಗಳನ್ನೇ ಹೊತ್ತಿಸಿದ್ದವು. ಆದರೆ, ಬಾಲಿವುಡ್ನ ಖ್ಯಾತ ನಿರ್ಮಾಪಕರೂ ಆಗಿರುವ ಕರಣ್ ಜೋಹರ್ ಇನ್ನು ಮುಂದೆ ವಿವಾದಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.</p>.<p>ಈ ಕುರಿತು ಫಿಲ್ಮ್ ಕಂಪ್ಯಾನಿಯನ್ ಜೊತೆ ಬುಧವಾರ ಮಾತನಾಡಿರುವ ಅವರು, 'ನನ್ನ ತಲೆಯಲ್ಲಿ ಹಲವು ವಿಚಾರಗಳು ಓಡುತ್ತವೆ. ಆದರೆ, ಅವುಗಳನ್ನು ಹೇಳಲು ನಾನು ಬಯಸುತ್ತಿಲ್ಲ. ಕಾರಣ, ನಾನು ನಿರ್ಬಂಧಕ್ಕೆ ಒಳಗಾಗಿದ್ದೇನೆ' ಎಂದು ತಿಳಿಸಿದ್ದಾರೆ.</p>.<p>'ನಿರ್ಬಂಧಕ್ಕೆ ಒಳಗಾಗಿರುವುದು ಬೇರೆ ಯಾವುದೇ ಕಾರಣಕ್ಕಾಗಿ ಅಲ್ಲ. ಈ ಹಿಂದಿನ ನನ್ನ ಹೇಳಿಕೆಗಳು ಬೇರೆಯವರ ಮನಸ್ಸಿಗೆ ನೋವು ಮಾಡಿವೆ. ಇದು ನನಗೀಗ ಬೇಡವಾಗಿದೆ' ಎಂದು ಕರಣ್ ಹೇಳಿದ್ದಾರೆ.</p>.<p>'ಇನ್ನು ಮುಂದೆ ಕೇವಲ ಚಿತ್ರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ನನ್ನ ಶಕ್ತಿಯನ್ನು ವ್ಯಯಿಸಲು ಬಯಸುತ್ತೇನೆ. ನಾನು ಹೇಳಲು ಬಯಸುವ ಬಹಳಷ್ಟು ವಿಚಾರಗಳಿಗೆ ತಡೆಯೊಡ್ಡಲಿದ್ದೇನೆ. ಇದು ನನಗೆ ನೋವಿನ ಸಂಗತಿಯೂ ಹೌದು' ಎಂದು ಕರಣ್ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾಗಲಿರುವ 'ಒನ್ ಮೈಕ್ ಸ್ಟ್ಯಾಂಡ್: ಸೀಸನ್ 2' ನಲ್ಲಿ ಕರಣ್ ಕಾಣಿಸಿಕೊಳ್ಳಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>