ಮುಂಬೈ: ಸ್ವಚ್ಛತೆಗೆ ಆದ್ಯತೆ ನೀಡುವ ಬಾಲಿವುಡ್ ಬೆಡಗಿಕತ್ರಿನಾ ಕೈಫ್ ಕಸ ಗುಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಷ್ಟಕ್ಕೂ ಕತ್ರಿನಾ ಕಸಗುಡಿಸುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದವರು ಬಾಲಿವುಡ್ ನಟ ಅಕ್ಷಯ್ ಕುಮಾರ್. ಅಷ್ಟಕ್ಕೂ ಕತ್ರಿನಾ ಕಸ ಗುಡಿಸಿದ್ದು ಯಾಕೆ? ಮತ್ತು ಎಲ್ಲಿ? ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ.
ಅಕ್ಷಯ್ ಮತ್ತು ಕತ್ರಿನಾಸೂರ್ಯವಂಶಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಸಿಕ್ಕಾಪಟ್ಟೆ ಕಸ ಬಿದ್ದಿರುವುದನ್ನು ಕಂಡ ಕತ್ರಿನಾಕಸ ಪೊರಕೆ ತೆಗೆದುಕೊಂಡು ಕಸ ಗುಡಿಸಿದ್ದಾರೆ. ಇದನ್ನು ವಿಡಿಯೊ ಮಾಡಿ, ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಅರೆರೇ...ಕತ್ರಿನಾ ಜೀ ಏನು ಮಾಡುತ್ತಿರುವಿರಿ? ಎಂಬ ಅಡಿ ಬರಹ ಬರೆದುವಿಡಿಯೊ ಪೋಸ್ಟ್ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅಕ್ಷಯ್‘ಸ್ವಚ್ಛ ಭಾರತ‘ ಅಭಿಯಾನದ ಹೊಸ ರಾಯಭಾರಿ ಎಂದು ಬರೆಯುವ ಮೂಲಕ ಕತ್ರಿನಾರನ್ನು ಕಿಚಾಯಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ವಿಡಿಯೊಗೆ ಅಭಿಮಾನಿಗಳು ತರಹೇವಾರಿ ಕಮೆಂಟ್ಗಳನ್ನು ಮಾಡಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಸೂರ್ಯವಂಶಿ ಸಿನಿಮಾ ಬಾರೀ ಕೂತುಹಲ ಕೆರಳಿಸಿದೆ. ಈ ಚಿತ್ರಕ್ಕೆಅಕ್ಷಯ್ ಕುಮಾರ್ ನೂರು ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.ಸೂರ್ಯವಂಶಿ ಚಿತ್ರವನ್ನು ಕರಣ್ ಜೋಹರ್ ಮತ್ತು ರೋಹಿತ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಕತ್ರಿನಾ ಕೈಫ್, ಅಜಯ್ ದೇವಗನ್, ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸೂರ್ಯವಂಶಿ ಸಿನಿಮಾ ಮಾರ್ಚ್ 27ಕ್ಕೆ ತೆರೆಗೆ ಬರಲಿದೆ.