ಹನುಮಂತ ಹಾಲಿಗೇರಿ ಅವರ ‘ಊರು ಸುಟ್ಟರೂ ಹನುಮಪ್ಪ ಹೊರಗೆ’ ನಾಟಕ ಆಧರಿಸಿದ ಸಿನಿಮಾ ‘ಜೈ ಕೇಸರಿ ನಂದನ’. ಇದು ಏಪ್ರಿಲ್ 12ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಹಾಡುಗಳ ಬಿಡುಗಡೆ ಈಚೆಗೆ ನಡೆಯಿತು.
‘ಉತ್ತರ ಕರ್ನಾಟಕದ ಕಂಪ್ಲೀಟ್ ಪ್ಯಾಕೇಜ್ ಇರುವ ಸಿನಿಮಾ ಇದು’ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರವನ್ನು ಶ್ರೀಧರ್ ಜಾವೂರ್ ನಿರ್ದೇಶಿಸಿದ್ದಾರೆ.
ಈ ಸಿನಿಮಾದಲ್ಲಿ ಗುರುರಾಜ್ ಹೊಸಕೋಟೆ, ರಾಜು ತಾಳಿಕೋಟೆ, ಶಶಿಧರ್ ದಾನಿ, ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಲ್ಲೇಶ್ ವರ್ಧನ್, ಅಮೃತ ಈ ಚಿತ್ರದ ನಾಯಕ-ನಾಯಕಿಯರ ಪಾತ್ರ ನಿರ್ವಹಿಸಿದ್ದಾರೆ.
ಎರಡು ಗ್ರಾಮಗಳ ನಡುವಿನ ಜಗಳದಲ್ಲಿ ಪೊಲೀಸ್ ಠಾಣೆ ಸೇರಿಕೊಂಡ ಹನುಮಂತಪ್ಪನ ಕಥೆ ಇದು. ‘ಧರಗಟ್ಟಿ ಮತ್ತು ವಜ್ರಗಟ್ಟಿ ಎಂಬ ಎರಡು ಊರು ಸುಟ್ಟು, ಹನುಮಪ್ಪನ ಜಾತ್ರೆ ಸಮಯದಲ್ಲಿ ನಡೆದ ಘೋರ ದುರಂತವನ್ನು ಈ ಚಿತ್ರದಲ್ಲಿ ಹೇಳಿದ್ದೇವೆ’ ಎಂದು ಶ್ರೀಧರ್ ಜಾವೂರ್ ಹೇಳಿದರು.
ಶಶಿಧರ್ ದಾನಿ, ಪ್ರವೀಣ್ ಕತ್ರಿ, ನಾರಾಯಣ ಷಾ, ಪವಾರ್, ಲಕ್ಷ್ಮಣ್ ಸಿಂಗ್ರಿ ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
‘ಗಂಭೀರ ವಿಷಯವನ್ನು ನಾಜೂಕಾಗಿ ಹೇಳುವ ಪ್ರಯತ್ನ ಇಲ್ಲಿದೆ’ ಎಂದರು ನಾಯಕ ನಟ ಕಲ್ಲೇಶ್.
ನಾಯಕಿ ಅಮೃತ ಆರ್. ಅವರು ಉತ್ತರ ಕರ್ನಾಟಕದವರೇ ಆಗಿರುವ ಕಾರಣ, ಅವರಿಗೆ ಸಿನಿಮಾದಲ್ಲಿ ಸಂಭಾಷಣೆ ಕಷ್ಟಕೊಡಲಿಲ್ಲವಂತೆ.