ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ತಿಂಗಳಲ್ಲಿ ‘ಮೃತ್ಯುಂಜಯ’ ತೆರೆಗೆ

Last Updated 15 ಏಪ್ರಿಲ್ 2021, 13:43 IST
ಅಕ್ಷರ ಗಾತ್ರ

ಶೈಲಜಾ ಪ್ರಕಾಶ್ ನಿರ್ಮಾಣದ ‘ಮೃತ್ಯುಂಜಯ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಂಗಮೇಶ್‌ ಎಸ್‌. ಸಜ್ಜನ್‌ ಅವರ ನಿರ್ದೇಶನ ಈ ಚಿತ್ರಕ್ಕಿದೆ.

ಸಾಮಾಜಿಕ ವಸ್ತುವಿನ ಕಥಾ ಹಂದರದ ಚಿತ್ರ ಇದು. ಆತ್ಮಹತ್ಯೆ ವಿರುದ್ಧ ಹೋರಾಟದ ಸಂದೇಶ ಇದರಲ್ಲಿದೆ. ಈ ಆಲೋಚನೆ ಮಾಡುವ ಯುವಜನರನ್ನು ಪರಿವರ್ತನೆ ಮಾಡುವ ವಿಷಯವನ್ನು ಒಳಗೊಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.ಚಿತ್ರದಲ್ಲಿ ಹಿತೇಶ್‌ ನಾಯಕ. ಶ್ರಿಯಾ ಶೆಟ್ಟಿ ನಾಯಕಿ. ಸುಮನ್‌ ನಗರ್‌ಕರ್‌ ಅವರು ಮನೋವೈದ್ಯರಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಆಟೊರಾಜ, ದುರ್ಗಾಪ್ರಸಾದ್, ಚೇತನ್‌ದುರ್ಗಾ, ಶಿವು ಮಜಾಭಾರತ, ರಂಗಭೂಮಿ ಕಲಾವಿದೆ ಪವಿತ್ರಾ, ಚೈತ್ರಾ, ಬಾಬಣ್ಣ ತಾರಾಗಣದಲ್ಲಿದ್ದಾರೆ.

ಬೆಂಗಳೂರು ಹಾಗೂ ದಾಬಸ್‌ಪೇಟೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ಆನಂದ್‌ರಾಜ್ ವಿಕ್ರಂ, ಛಾಯಾಗ್ರಹಣ ವಡ್ಡೆ ದೇವೇಂದ್ರರೆಡ್ಡಿ, ಸಂಕಲನ ಸಾಯಿಸಂದೇಶ್ ಅವರದಾಗಿದೆ. ಕೊರೊನಾ ಆತಂಕದ ನಡುವೆಯೂ 198 ಗಂಟೆಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT