ಸಾಮಾಜಿಕ ವಸ್ತುವಿನ ಕಥಾ ಹಂದರದ ಚಿತ್ರ ಇದು. ಆತ್ಮಹತ್ಯೆ ವಿರುದ್ಧ ಹೋರಾಟದ ಸಂದೇಶ ಇದರಲ್ಲಿದೆ. ಈ ಆಲೋಚನೆ ಮಾಡುವ ಯುವಜನರನ್ನು ಪರಿವರ್ತನೆ ಮಾಡುವ ವಿಷಯವನ್ನು ಒಳಗೊಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.ಚಿತ್ರದಲ್ಲಿ ಹಿತೇಶ್ ನಾಯಕ. ಶ್ರಿಯಾ ಶೆಟ್ಟಿ ನಾಯಕಿ. ಸುಮನ್ ನಗರ್ಕರ್ ಅವರು ಮನೋವೈದ್ಯರಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಆಟೊರಾಜ, ದುರ್ಗಾಪ್ರಸಾದ್, ಚೇತನ್ದುರ್ಗಾ, ಶಿವು ಮಜಾಭಾರತ, ರಂಗಭೂಮಿ ಕಲಾವಿದೆ ಪವಿತ್ರಾ, ಚೈತ್ರಾ, ಬಾಬಣ್ಣ ತಾರಾಗಣದಲ್ಲಿದ್ದಾರೆ.