ನಾನು ಸಮಾಜವನ್ನು ಉದ್ಧಾರ ಮಾಡುತ್ತೇನೆ, ನನಗೆ ಹೆಸರು ಬರಬೇಕು ಎಂಬ ಅಹಂ, ಸುಳ್ಳು ಸ್ವಾರ್ಥ ಇರಬಾರದು; ಪ್ರಜೆಗಳು (owners) ಹೇಳಿದಂತೆ ಕೆಲಸ ಮಾಡಿ ಅದಕ್ಕೆ ತಕ್ಕ ಪ್ರತಿಫಲ ಸಂಬಳದ ರೂಪದಲ್ಲಿ ಪಡೆಯುತ್ತೇನೆ ಎಂಬ ಸತ್ಯವಾದ ಸ್ವಾರ್ಥವಿರಬೇಕು;ಪ್ರಜೆಗಳು (owners) ತಿರಸ್ಕರಿಸದರೆ ಅವಮಾನ ಎಂದು ತಿಳಿಯದೇ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೆಳಗಿಳಿಯುವ ಬಲಿದಾನಕ್ಕೆ ಸಿದ್ಧರಿರಬೇಕು.ಏನಂತೀರಾ? ಇದಕ್ಕೆ ಎಷ್ಟು ಜನ ರೆಡಿ ಇದ್ದೀರಾ? ಎಂದು ಉಪ್ಪಿ ಉತ್ತಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಗಳಾಗುವವರ ಮುಂದೆ ಈ ಪ್ರಶ್ನೆಗಳನ್ನು ಇಟ್ಟಿದ್ದಾರೆ.