'ಭೋಪಾಲದ ಹೊರವಲಯದಲ್ಲಿ ಆಶ್ರಮ್ 3 ವೆಬ್ ಸರಣಿಯ ಶೂಟಿಂಗ್ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಜರಂಗದಳದ ಕಾರ್ಯಕರ್ತರು ಸೆಟ್ ಅನ್ನು ಧ್ವಂಸಗೊಳಿಸಿದ್ದಾರೆ. ನಿರ್ದೇಶಕ ಪ್ರಕಾಶ್ ಝಾ ಅವರ ಮೇಲೆ ಮಸಿ ಎರಚಿದ್ದಾರೆ' ಎಂದು ವಿಡಿಯೊ ಸಹಿತ ಸುದ್ದಿಯನ್ನು ಎನ್ಡಿಟಿವಿ ಪ್ರಕಟಿಸಿದೆ.
ಬಜರಂಗದಳದ ಕಾರ್ಯಕರ್ತರು ಸಿಬ್ಬಂದಿಯನ್ನು ಬೆನ್ನಟ್ಟಿ, ಮೆಟಲ್ ಲೈಟ್ ಸ್ಟ್ಯಾಂಡ್ನಿಂದ ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.