ಚಿತ್ರದಲ್ಲಿ, ಪೃಥ್ವಿ ಅಂಬರ್ ಒಂದು ಹಾಡಿಗೂ ಧ್ವನಿಯಾಗಿದ್ದು, ಲಾಸ್ಯ ನಾಗರಾಜ್ ಈ ಚಿತ್ರದ ನಾಯಕಿ. ಉಳಿದಂತೆ ಸಿದ್ಲುಂಗು ಶ್ರೀಧರ್, ಪದ್ಮ ಶಿವಮೊಗ್ಗ, ಮಾಂತೇಶ್ ಮುಂತಾದವರು ನಟಿಸಿದ್ದಾರೆ. ಮದನ್ ಬೆಳ್ಳಿಸಾಲು, ಧನಂಜಯ್ ರಂಜನ್ ಸಾಹಿತ್ಯದ ಗೀತೆಗಳಿಗೆ ನೋಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಗೌತಮ್ ಛಾಯಾಗ್ರಹಣ, ಸಂದೀಪ್ ಸಂಕಲನವಿದೆ. ಸಿನಿಮಾಗೆ ಕಿಶೋರ್ ನರಸಿಂಹಯ್ಯ ಮತ್ತು ಬಿ.ಜಿ.ಅರುಣ್ ಬಂಡವಾಳ ಹೂಡಿದ್ದಾರೆ. ಫ್ರೈಡೆ ಫಿಲಿಂಸ್ ಮತ್ತು ಸಿಲ್ವರ್ ಟ್ರೈನ್ ಇಂಟರ್ನ್ಯಾಷನಲ್ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಚಿತ್ರವನ್ನು ಶೀಘ್ರದಲ್ಲೇ ತೆರೆಗೆ ತರಲು ಚಿತ್ರತಂಡವು ಸಿದ್ಧತೆ ನಡೆಸಿದೆ.