<p>ಬಿಎಂಟಿಸಿಯು ಇತ್ತೀಚೆಗೆ ಆರಂಭಿಸಿರುವ ಪ್ರತ್ಯೇಕ ಬಸ್ ಪಥ 'ನಿಮ್ಮ ಬಸ್'ಯೋಜನೆಯನ್ನು ಪ್ರಚುರಪಡಿಸಲು ಕನ್ನಡದ ಪ್ರಸಿದ್ಧ ನಟ ಪುನೀತ್ ರಾಜ್ಕುಮಾರ್ ಅವರನ್ನು ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಿದೆ.</p>.<p>'ಅಪ್ಪು ಸರ್ ಯಾವುದೇ ಸಂಭಾವನೆ ಪಡೆಯದೇ ಬಿಎಂಟಿಸಿಗೆರಾಯಭಾರಿಯಾಗಲು ಒಪ್ಪಿಗೆ ನೀಡಿದ್ದಾರೆ'ಎನ್ನುವ ಪ್ರಶಂಸೆಯ ಮಾತುಗಳು <strong>ಪುನೀತ್ ಫ್ಯಾನ್ಸ್ ಕ್ಲಬ್</strong>ನ ಟ್ವೀಟರ್ ಖಾತೆಯಲ್ಲಿ ಹರಿದಾಡುತ್ತಿವೆ.</p>.<p>ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ಇತ್ತೀಚೆಗಷ್ಟೇ,ಬಿಎಂಟಿಸಿ, ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸರ ಜಂಟಿ ಸಹಯೋಗದಲ್ಲಿ ಆರಂಭಿಸಿರುವ <strong>ನಿಮ್ಮ ಬಸ್</strong>ಮಹತ್ವಾಕಾಂಕ್ಷಿ ಯೋಜನೆಯ ಯಶಸ್ಸಿಗೆ ನಟ ಪುನೀತ್ರಾಜ್ ಕುಮಾರ್ ಅವರನ್ನು ಪ್ರಚಾರ ರಾಯಭಾರಿಯಾಗುವಂತೆ ಕೇಳಿಕೊಂಡಿದ್ದೇವೆ. ಅವರು ಒಪ್ಪಿದರೆ ಈ ಯೋಜನೆ ಯಶಸ್ವಿಯಾಗುವುದು ಖಚಿತವೆಂದು ಹೇಳಿದ್ದರು.</p>.<p>ನಗರದ ಕೆ.ಆರ್.ಪುರಂನಿಂದ ವೈಟ್ ಫೀಲ್ಡ್ವರೆಗೆ ‘ನಿಮ್ಮ ಬಸ್’ ಹೆಸರಿನಲ್ಲಿ ಬಿಎಂಟಿಸಿ ಬಸ್ಗಳನ್ನುಕಳೆದ ನವೆಂಬರ್ 15ರಿಂದ ಪ್ರತ್ಯೇಕ ಪಥದಲ್ಲಿ ಓಡಿಸಲಾಗುತ್ತಿತ್ತು.</p>.<p>ಪುನೀತ್ ರಾಜ್ಕುಮಾರ್ ಈ ಹಿಂದೆ ಕರ್ನಾಟಕ ಹಾಲು ಮಹಾಮಂಡಳದ ಉತ್ಪನ್ನಗಳ ಪ್ರಚಾರ ರಾಯಭಾರಿ ಆಗಿದ್ದರು.</p>.<p>ಈ ನಡುವೆ ಪುನೀತ್ ಮತ್ತು ಸಂತೋಷ್ ಆನಂದರಾಮ್ ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತಿರುವ ‘ಯುವರತ್ನ’ ಚಿತ್ರದಟಾಕಿ ಪೋರ್ಷನ್ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ರೆಡಿಯಾಗುತ್ತಿದೆ. ಇದೇ 31ಕ್ಕೆ ಪುನೀತ್ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕಾದಿದೆ ಎನ್ನುವ ಕುತೂಹಲವನ್ನು ಚಿತ್ರತಂಡ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿಎಂಟಿಸಿಯು ಇತ್ತೀಚೆಗೆ ಆರಂಭಿಸಿರುವ ಪ್ರತ್ಯೇಕ ಬಸ್ ಪಥ 'ನಿಮ್ಮ ಬಸ್'ಯೋಜನೆಯನ್ನು ಪ್ರಚುರಪಡಿಸಲು ಕನ್ನಡದ ಪ್ರಸಿದ್ಧ ನಟ ಪುನೀತ್ ರಾಜ್ಕುಮಾರ್ ಅವರನ್ನು ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಿದೆ.</p>.<p>'ಅಪ್ಪು ಸರ್ ಯಾವುದೇ ಸಂಭಾವನೆ ಪಡೆಯದೇ ಬಿಎಂಟಿಸಿಗೆರಾಯಭಾರಿಯಾಗಲು ಒಪ್ಪಿಗೆ ನೀಡಿದ್ದಾರೆ'ಎನ್ನುವ ಪ್ರಶಂಸೆಯ ಮಾತುಗಳು <strong>ಪುನೀತ್ ಫ್ಯಾನ್ಸ್ ಕ್ಲಬ್</strong>ನ ಟ್ವೀಟರ್ ಖಾತೆಯಲ್ಲಿ ಹರಿದಾಡುತ್ತಿವೆ.</p>.<p>ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ಇತ್ತೀಚೆಗಷ್ಟೇ,ಬಿಎಂಟಿಸಿ, ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸರ ಜಂಟಿ ಸಹಯೋಗದಲ್ಲಿ ಆರಂಭಿಸಿರುವ <strong>ನಿಮ್ಮ ಬಸ್</strong>ಮಹತ್ವಾಕಾಂಕ್ಷಿ ಯೋಜನೆಯ ಯಶಸ್ಸಿಗೆ ನಟ ಪುನೀತ್ರಾಜ್ ಕುಮಾರ್ ಅವರನ್ನು ಪ್ರಚಾರ ರಾಯಭಾರಿಯಾಗುವಂತೆ ಕೇಳಿಕೊಂಡಿದ್ದೇವೆ. ಅವರು ಒಪ್ಪಿದರೆ ಈ ಯೋಜನೆ ಯಶಸ್ವಿಯಾಗುವುದು ಖಚಿತವೆಂದು ಹೇಳಿದ್ದರು.</p>.<p>ನಗರದ ಕೆ.ಆರ್.ಪುರಂನಿಂದ ವೈಟ್ ಫೀಲ್ಡ್ವರೆಗೆ ‘ನಿಮ್ಮ ಬಸ್’ ಹೆಸರಿನಲ್ಲಿ ಬಿಎಂಟಿಸಿ ಬಸ್ಗಳನ್ನುಕಳೆದ ನವೆಂಬರ್ 15ರಿಂದ ಪ್ರತ್ಯೇಕ ಪಥದಲ್ಲಿ ಓಡಿಸಲಾಗುತ್ತಿತ್ತು.</p>.<p>ಪುನೀತ್ ರಾಜ್ಕುಮಾರ್ ಈ ಹಿಂದೆ ಕರ್ನಾಟಕ ಹಾಲು ಮಹಾಮಂಡಳದ ಉತ್ಪನ್ನಗಳ ಪ್ರಚಾರ ರಾಯಭಾರಿ ಆಗಿದ್ದರು.</p>.<p>ಈ ನಡುವೆ ಪುನೀತ್ ಮತ್ತು ಸಂತೋಷ್ ಆನಂದರಾಮ್ ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತಿರುವ ‘ಯುವರತ್ನ’ ಚಿತ್ರದಟಾಕಿ ಪೋರ್ಷನ್ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ರೆಡಿಯಾಗುತ್ತಿದೆ. ಇದೇ 31ಕ್ಕೆ ಪುನೀತ್ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕಾದಿದೆ ಎನ್ನುವ ಕುತೂಹಲವನ್ನು ಚಿತ್ರತಂಡ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>