ತಿಂಗಳ ಹಿಂದೆ ಸಿರುತೈ ಶಿವ ಅವರು ರಜನಿಕಾಂತ್ ಅವರ ಜೊತೆ ಚಿತ್ರಕತೆ ಬಗ್ಗೆ ಮಾತುಕತೆ ನಡೆಸಿದ್ದರು. ಚಿತ್ರದಲ್ಲಿ ನಟಿಸಲು ಉತ್ಸಾಹ ತೋರಿಸಿದ ರಜನಿಕಾಂತ್, ಚಿತ್ರಕತೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವಂತೆ ಆಗ ತಿಳಿಸಿದ್ದಾರೆನ್ನಲಾಗಿದೆ. ಅವರು ತಿಳಿಸಿದಂತೆ ಬದಲಾವಣೆ ಮಾಡಿಕೊಂಡ ಶಿವ ಅವರು ಇತ್ತೀಚೆಗೆ ರಜನಿಕಾಂತ್ ಅವರನ್ನು ಚೆನ್ನೈನ ಗಾರ್ಡನ್ ರೆಸಿಡೆನ್ಸಿಯಲ್ಲಿನ ಅವರ ಮನೆಯಲ್ಲಿ ಭೇಟಿ ಮಾಡಿ ನಾಲ್ಕು ಗಂಟೆಗಳ ಕಾಲ ಚಿತ್ರಕತೆ ವಿವರಿಸಿದ್ದರು.