ಸಮಾಜದಲ್ಲಿ ಕಾನೂನು ಬದ್ಧವಾಗಿಯೇ ಬಾಳುತ್ತಿದ್ದವನೊಬ್ಬ ನ್ಯಾಯಕ್ಕಾಗಿ ಬಂಡಾಯಗಾರನಾಗಿ ಬದಲಾಗುತ್ತಾನೆ. ಮುಂದೆ ತಾನು ಆರಿಸಿಕೊಂಡ ಪ್ರಪಂಚದಲ್ಲಿ ಅನಿವಾರ್ಯವಾಗಿ ಬಾಳುತ್ತಾನೆ. ಆದರೆ, ಮತ್ತೆ ಸಾಮಾನ್ಯ ಬದುಕಿಗೆ ಮರಳುತ್ತಾನೆಯೇ? ಇಲ್ಲವೇ? ಅವನ ಪ್ರೀತಿಯನ್ನು ಮರಳಿ ಪಡೆಯುವಲ್ಲಿ ಯಶಸ್ವಿ ಆಗುತ್ತಾನೆಯೇ ಎಂಬುದು ಕಥೆಯ ತಿರುಳು ಎಂದಿದ್ದಾರೆ ರಬಿ.
24ಕ್ಕೂ ಹೆಚ್ಚು ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಫೈರಿಂಗ್, ಬಾಂಬ್ ಬ್ಲಾಸ್ಟ್, ಚೇಸಿಂಗ್ನಂಥ ಸಾಹಸ ದೃಶ್ಯಗಳು ಮೈನವಿರೇಳಿಸುತ್ತವೆ. ಒಂದು ಹೃದಯಸ್ಪರ್ಶಿ ಕಥೆಯನ್ನು ತೆರೆಯ ಮೇಲೆ ತರಲು ಪ್ರಯತ್ನಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಅಂದಹಾಗೆ ಕೇವಲ ₹ 3 ಲಕ್ಷ ವೆಚ್ಚದಲ್ಲಿ ಚಿತ್ರೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.