<p><strong>ಮುಂಬೈ</strong>: ಮಾಯಾ ದರ್ಪಣ್, ತರಂಗ್ ಮುಂತಾದ ಸಿನೆಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಿರ್ದೇಶಕ ಕುಮಾರ್ ಶಹಾನಿ ವಯೋ ಸಹಜ ಕಾಯಿಲೆಯಿಂದ ನಿಧರಾಗಿದ್ದಾರೆ.</p><p>‘ಶನಿವಾರ ತಡರಾತ್ರಿ ಕೋಲ್ಕತ್ತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ’ ಎಂದು ಶಹಾನಿ ಆಪ್ತ ಸ್ನೇಹಿತೆ, ನಟಿ ಮಿತಾ ವಶಿಷ್ಠ ತಿಳಿಸಿದ್ದಾರೆ.</p><p>ಕುಮಾರ್ ಶಹಾನಿ1940 ಜನವರಿ 7ರಂದು ಸಿಂಧ್ನ ಲರ್ಕಾನಾದಲ್ಲಿ ಜನಿಸಿದ್ದರು. 1947 ರ ದೇಶ ವಿಭಜನೆಯ ನಂತರ ಶಹಾನಿ ಕುಟುಂಬ ಬಾಂಬೆಗೆ ಸ್ಥಳಾಂತರಗೊಂಡಿತ್ತು.</p><p>ಬಾಲ್ಯದಲ್ಲಿ ಸಿನಿಮಾ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ ಶಹಾನಿ, ಖ್ಯಾತ ನಿರ್ದೇಶಕ ಮಣಿ ಕೌಲ್ ಅವರೊಂದಿಗೆ ಪುಣೆಯ ‘ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ದಲ್ಲಿ ಅಧ್ಯಯನ ನಡೆಸಿದ್ದರು.</p><p>1972ರಲ್ಲಿ ಚಿತ್ರರಂಗ ಪ್ರವೇಶಿಸಿದ ಶಹಾನಿ, ಮೊದಲ ಚಿತ್ರ ‘ಮಾಯಾ ದರ್ಪಣ್‘ ಮೂಲಕ ಭರವಸೆ ನಿರ್ದೇಶಕ ಎನಿಸಿಕೊಂಡಿದ್ದರು. 1984ರಲ್ಲಿ ನಿರ್ದೇಶಿಸಿದ ‘ತರಂಗ್’ ಚಿತ್ರವು ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿತ್ತು. ಖಯಾಲ್ ಗಾಥಾ ಮತ್ತು ಕಸ್ಬಾ ಚಿತ್ರವೂ ಅಪಾರ ಜನಮನ್ನಣೆ ಗಳಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಮಾಯಾ ದರ್ಪಣ್, ತರಂಗ್ ಮುಂತಾದ ಸಿನೆಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಿರ್ದೇಶಕ ಕುಮಾರ್ ಶಹಾನಿ ವಯೋ ಸಹಜ ಕಾಯಿಲೆಯಿಂದ ನಿಧರಾಗಿದ್ದಾರೆ.</p><p>‘ಶನಿವಾರ ತಡರಾತ್ರಿ ಕೋಲ್ಕತ್ತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ’ ಎಂದು ಶಹಾನಿ ಆಪ್ತ ಸ್ನೇಹಿತೆ, ನಟಿ ಮಿತಾ ವಶಿಷ್ಠ ತಿಳಿಸಿದ್ದಾರೆ.</p><p>ಕುಮಾರ್ ಶಹಾನಿ1940 ಜನವರಿ 7ರಂದು ಸಿಂಧ್ನ ಲರ್ಕಾನಾದಲ್ಲಿ ಜನಿಸಿದ್ದರು. 1947 ರ ದೇಶ ವಿಭಜನೆಯ ನಂತರ ಶಹಾನಿ ಕುಟುಂಬ ಬಾಂಬೆಗೆ ಸ್ಥಳಾಂತರಗೊಂಡಿತ್ತು.</p><p>ಬಾಲ್ಯದಲ್ಲಿ ಸಿನಿಮಾ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ ಶಹಾನಿ, ಖ್ಯಾತ ನಿರ್ದೇಶಕ ಮಣಿ ಕೌಲ್ ಅವರೊಂದಿಗೆ ಪುಣೆಯ ‘ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ದಲ್ಲಿ ಅಧ್ಯಯನ ನಡೆಸಿದ್ದರು.</p><p>1972ರಲ್ಲಿ ಚಿತ್ರರಂಗ ಪ್ರವೇಶಿಸಿದ ಶಹಾನಿ, ಮೊದಲ ಚಿತ್ರ ‘ಮಾಯಾ ದರ್ಪಣ್‘ ಮೂಲಕ ಭರವಸೆ ನಿರ್ದೇಶಕ ಎನಿಸಿಕೊಂಡಿದ್ದರು. 1984ರಲ್ಲಿ ನಿರ್ದೇಶಿಸಿದ ‘ತರಂಗ್’ ಚಿತ್ರವು ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿತ್ತು. ಖಯಾಲ್ ಗಾಥಾ ಮತ್ತು ಕಸ್ಬಾ ಚಿತ್ರವೂ ಅಪಾರ ಜನಮನ್ನಣೆ ಗಳಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>