<p><strong>ಬೆಂಗಳೂರು:</strong> ಜನ್ಮದಿನ ಆಚರಣೆ ವೇಳೆ ಕತ್ತಿಯಲ್ಲಿ (ತಲ್ವಾರ್) ಕೇಕ್ ಕತ್ತರಿಸಿ ವಿವಾದಕ್ಕೆ ಕಾರಣರಾಗಿದ್ದ ನಟ ದುನಿಯಾ ವಿಜಯ್ ಮಂಗಳವಾರ ಗಿರಿನಗರ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು.</p>.<p>ಸುಮಾರು ಎರಡು ಗಂಟೆ ಪೊಲೀಸರ ಮುಂದೆ ಘಟನೆ ಬಗ್ಗೆ ವಿಜಯ್ ವಿವರಣೆ ನೀಡಿದರು. ನಿಯಮ ಉಲ್ಲಂಘಿಸಿ, ಕತ್ತಿ ಬಳಸಿ ಕೇಕ್ ಕತ್ತರಿಸಿದ ಕಾರಣಕ್ಕೆ ವಿಜಯ್ ಅವರಿಗೆ ಗಿರಿನಗರ ಪೊಲೀಸರು ನೋಟಿಸ್ ನೀಡಿದ್ದರು.</p>.<p><em><strong>ಇದನ್ನೂ ಓದಿ:<a href="https://www.prajavani.net/entertainment/cinema/duniya-vijay-for-using-sword-to-cut-birthday-cake-699569.html">ತಲ್ವಾರ್ನಿಂದ ಕೇಕ್ ಕತ್ತರಿಸಿದ ದುನಿಯಾ ವಿಜಯ್!</a></strong></em></p>.<p>ವಿಚಾರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಜಯ್, 'ನನ್ನಿಂದ ತಪ್ಪಾಗಿದೆ, ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೆನೆ. ಪೊಲೀಸರು ಮತ್ತೆ ವಿಚಾರಣೆಗೆ ಕರೆದಿದ್ದು ಹಾಜರಾಗುತ್ತೇನೆ ಎಂದು ಹೇಳಿದರು.</p>.<p>'ಹುಟ್ಟು ಹಬ್ಬದ ಆಚರಣೆ ವೇಳೆ ಅಕ್ಕಪಕ್ಕದವರಿಗೆ ತೊಂದರೆ ಆಗಿದೆ ಎಂದಿದ್ದಾರೆ. ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುವೆ ಎಂದು ವಿಜಯ್ ತಿಳಿಸಿದ್ದಾರೆ.<br /><br />ಜನ್ಮದಿನ ಆಚರಣೆ ವೇಳೆ ಯಾರೋ ಅಭಿಮಾನಿ ತಲ್ವಾರ್ ಕೊಟ್ಟ, ಆ ತಲ್ವಾರ್ನಲ್ಲಿ ಕೇಕ್ ಕಟ್ ಮಾಡೋದು ತಪ್ಪು ಎಂದು ನಂಗೆ ಗೊತ್ತಿರಲಿಲ್ಲ, ಅದು ಯಾರು ತಂದು ಕೊಟ್ರು ಅಂತಾ ಕೂಡ ಗೊತ್ತಾಗಲಿಲ್ಲ, ತುಂಬಾ ಜನ ಇದ್ದರು' ಎಂದರು.</p>.<p>'ತಲ್ವಾರ್ ಈಗ ಎಲ್ಲಿದೆ ಅಂತನೂ ಗೊತ್ತಿಲ್ಲ, ಎಲ್ಲಿದೆ ಅಂತ ಹುಡುಕಿ ತಂದು ಕೊಡುವೆ ಹಾಗೂ ಅಂದಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನೂ ಪೊಲೀಸರಿಗೆ ತಂದು ಕೊಡುತ್ತೇನೆ' ಎಂದೂ ವಿಜಯ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಜನ್ಮದಿನ ಆಚರಣೆ ವೇಳೆ ಕತ್ತಿಯಲ್ಲಿ (ತಲ್ವಾರ್) ಕೇಕ್ ಕತ್ತರಿಸಿ ವಿವಾದಕ್ಕೆ ಕಾರಣರಾಗಿದ್ದ ನಟ ದುನಿಯಾ ವಿಜಯ್ ಮಂಗಳವಾರ ಗಿರಿನಗರ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು.</p>.<p>ಸುಮಾರು ಎರಡು ಗಂಟೆ ಪೊಲೀಸರ ಮುಂದೆ ಘಟನೆ ಬಗ್ಗೆ ವಿಜಯ್ ವಿವರಣೆ ನೀಡಿದರು. ನಿಯಮ ಉಲ್ಲಂಘಿಸಿ, ಕತ್ತಿ ಬಳಸಿ ಕೇಕ್ ಕತ್ತರಿಸಿದ ಕಾರಣಕ್ಕೆ ವಿಜಯ್ ಅವರಿಗೆ ಗಿರಿನಗರ ಪೊಲೀಸರು ನೋಟಿಸ್ ನೀಡಿದ್ದರು.</p>.<p><em><strong>ಇದನ್ನೂ ಓದಿ:<a href="https://www.prajavani.net/entertainment/cinema/duniya-vijay-for-using-sword-to-cut-birthday-cake-699569.html">ತಲ್ವಾರ್ನಿಂದ ಕೇಕ್ ಕತ್ತರಿಸಿದ ದುನಿಯಾ ವಿಜಯ್!</a></strong></em></p>.<p>ವಿಚಾರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಜಯ್, 'ನನ್ನಿಂದ ತಪ್ಪಾಗಿದೆ, ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೆನೆ. ಪೊಲೀಸರು ಮತ್ತೆ ವಿಚಾರಣೆಗೆ ಕರೆದಿದ್ದು ಹಾಜರಾಗುತ್ತೇನೆ ಎಂದು ಹೇಳಿದರು.</p>.<p>'ಹುಟ್ಟು ಹಬ್ಬದ ಆಚರಣೆ ವೇಳೆ ಅಕ್ಕಪಕ್ಕದವರಿಗೆ ತೊಂದರೆ ಆಗಿದೆ ಎಂದಿದ್ದಾರೆ. ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುವೆ ಎಂದು ವಿಜಯ್ ತಿಳಿಸಿದ್ದಾರೆ.<br /><br />ಜನ್ಮದಿನ ಆಚರಣೆ ವೇಳೆ ಯಾರೋ ಅಭಿಮಾನಿ ತಲ್ವಾರ್ ಕೊಟ್ಟ, ಆ ತಲ್ವಾರ್ನಲ್ಲಿ ಕೇಕ್ ಕಟ್ ಮಾಡೋದು ತಪ್ಪು ಎಂದು ನಂಗೆ ಗೊತ್ತಿರಲಿಲ್ಲ, ಅದು ಯಾರು ತಂದು ಕೊಟ್ರು ಅಂತಾ ಕೂಡ ಗೊತ್ತಾಗಲಿಲ್ಲ, ತುಂಬಾ ಜನ ಇದ್ದರು' ಎಂದರು.</p>.<p>'ತಲ್ವಾರ್ ಈಗ ಎಲ್ಲಿದೆ ಅಂತನೂ ಗೊತ್ತಿಲ್ಲ, ಎಲ್ಲಿದೆ ಅಂತ ಹುಡುಕಿ ತಂದು ಕೊಡುವೆ ಹಾಗೂ ಅಂದಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನೂ ಪೊಲೀಸರಿಗೆ ತಂದು ಕೊಡುತ್ತೇನೆ' ಎಂದೂ ವಿಜಯ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>