ಬಹುತೇಕ ರಸ್ತೆಗಳು ಎರೆಮಣ್ಣಿನಿಂದ ಕೂಡಿರುವ ಕಾರಣ ಪ್ರತಿ ವರ್ಷ ಡಾಂಬರು ಕಿತ್ತು ಹೋಗುತ್ತದೆ. ಹಾಗಾಗಿ ಪ್ರತಿವರ್ಷ ದುರಸ್ತಿ ತಪ್ಪಿದ್ದಲ್ಲ. ಆದ್ದರಿಂದ ಈ ಭಾಗಕ್ಕೆ ಅತ್ಯುತ್ತಮ ದರ್ಜೆಯ ರಸ್ತೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಬೂದಿಹಾಳ ಡೋಣ ಗ್ರಾಮದ ಶಿವಾನಂದ ಸಾತಿಹಾಳ, ಜಿ.ಕೆ.ಹಿರೇಮಠ, ಮಹಾದೇವ ಸಾಲೋಡಗಿ, ಹಣಮಂತ್ರಾಯ ಬಡಿಗೇರ, ಶಂಕರಗೌಡ ಬಿರಾದಾರ ಆಗ್ರಹಿಸಿದ್ದಾರೆ.