<p><strong>ಮೈಸೂರು</strong>: ‘ಜೆ.ಕೆ.ಮೂವೀಸ್ ಬ್ಯಾನರ್ನಲ್ಲಿ ನಿರ್ಮಾಣಗೊಂಡಿರುವ ‘ಕೇದಾರ್ನಾಥ್ ಕುರಿ ಫಾರಂ’ ಚಲನಚಿತ್ರವು ಸೆ.27ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ’ ಎಂದು ನಿರ್ದೇಶಕ ಶೀನು ಸಾಗರ್ ತಿಳಿಸಿದರು.</p>.<p>ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರವು ಗ್ರಾಮೀಣ ಹಿನ್ನೆಲೆಯ ಹಾಸ್ಯಮಯ ಕಥೆ ಹೊಂದಿದೆ. ಸಕಲೇಶಪುರ, ಸಾವನದುರ್ಗ, ಮಾಗಡಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದು ಹಾಡು ಮತ್ತು ಸಾಹಸ ದೃಶ್ಯವಿದ್ದು, ಅದ್ಭುತವಾಗಿ ಮೂಡಿಬಂದಿದೆ. ಕುಟುಂಬ ಸಮೇತರಾಗಿ ಪ್ರತಿಯೊಬ್ಬರೂ ನೋಡುವ ಚಿತ್ರವಿದು’ ಎಂದರು.</p>.<p>‘ಕಲಾವಿದ ಟೆನ್ನಿಸ್ ಕೃಷ್ಣ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನಟರಾದ ಮಡೆನೂರು ಮನು ಹಾಗೂ ಶಿವಾನಿ ಮೊದಲ ಬಾರಿ ನಾಯಕ, ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಮನರಂಜನೆಯೊಂದಿಗೆ ಜನರಿಗೆ ಉತ್ತಮ ಸಂದೇಶವಿದ್ದು, ಎಲ್ಲರೂ ಚಲನಚಿತ್ರ ನೋಡಿ ಪ್ರೋತ್ಸಾಹಿಸಿ’ ಎಂದು ಮನವಿ ಮಾಡಿದರು.</p>.<p>ನಿರ್ಮಾಪಕ ಕೆ.ಎಂ.ನಾಗರಾಜ್, ಸಹ ನಿರ್ದೇಶಕ ರಾಜೇಶ್ ಸಾಲುಂಡಿ, ನಟರಾದ ಹರಿಣಿ, ಸಿದ್ದು ಮಂಡ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಜೆ.ಕೆ.ಮೂವೀಸ್ ಬ್ಯಾನರ್ನಲ್ಲಿ ನಿರ್ಮಾಣಗೊಂಡಿರುವ ‘ಕೇದಾರ್ನಾಥ್ ಕುರಿ ಫಾರಂ’ ಚಲನಚಿತ್ರವು ಸೆ.27ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ’ ಎಂದು ನಿರ್ದೇಶಕ ಶೀನು ಸಾಗರ್ ತಿಳಿಸಿದರು.</p>.<p>ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರವು ಗ್ರಾಮೀಣ ಹಿನ್ನೆಲೆಯ ಹಾಸ್ಯಮಯ ಕಥೆ ಹೊಂದಿದೆ. ಸಕಲೇಶಪುರ, ಸಾವನದುರ್ಗ, ಮಾಗಡಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದು ಹಾಡು ಮತ್ತು ಸಾಹಸ ದೃಶ್ಯವಿದ್ದು, ಅದ್ಭುತವಾಗಿ ಮೂಡಿಬಂದಿದೆ. ಕುಟುಂಬ ಸಮೇತರಾಗಿ ಪ್ರತಿಯೊಬ್ಬರೂ ನೋಡುವ ಚಿತ್ರವಿದು’ ಎಂದರು.</p>.<p>‘ಕಲಾವಿದ ಟೆನ್ನಿಸ್ ಕೃಷ್ಣ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನಟರಾದ ಮಡೆನೂರು ಮನು ಹಾಗೂ ಶಿವಾನಿ ಮೊದಲ ಬಾರಿ ನಾಯಕ, ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಮನರಂಜನೆಯೊಂದಿಗೆ ಜನರಿಗೆ ಉತ್ತಮ ಸಂದೇಶವಿದ್ದು, ಎಲ್ಲರೂ ಚಲನಚಿತ್ರ ನೋಡಿ ಪ್ರೋತ್ಸಾಹಿಸಿ’ ಎಂದು ಮನವಿ ಮಾಡಿದರು.</p>.<p>ನಿರ್ಮಾಪಕ ಕೆ.ಎಂ.ನಾಗರಾಜ್, ಸಹ ನಿರ್ದೇಶಕ ರಾಜೇಶ್ ಸಾಲುಂಡಿ, ನಟರಾದ ಹರಿಣಿ, ಸಿದ್ದು ಮಂಡ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>