ಮಂಗಳವಾರ, 7 ಅಕ್ಟೋಬರ್ 2025
×
ADVERTISEMENT
ADVERTISEMENT

ಕಮಲ್‌ ಹಾಸನ್‌ ಕ್ಷಮೆ ಕೇಳದಿದ್ದರೆ ‘ಥಗ್ ಲೈಫ್’ಗೆ ಅಡ್ಡಿ:ನರಸಿಂಹಲು ಎಚ್ಚರಿಕೆ

Published : 29 ಮೇ 2025, 16:37 IST
Last Updated : 29 ಮೇ 2025, 16:37 IST
ಫಾಲೋ ಮಾಡಿ
Comments
ಕನ್ನಡಕ್ಕೆ ಪ್ರಾಚೀನ ಇತಿಹಾಸವಿದೆ. ಹಿರಿಮೆ, ಶ್ರೀಮಂತಿಕೆ ಹೊಂದಿದೆ. ಕಮಲ್‌ ಆ ಹೇಳಿಕೆ ಕೊಡುವ ಮುಂಚೆ ಯೋಚಿಸಬೇಕಿತ್ತು. ಅವರ ಹೇಳಿಕೆ ತಪ್ಪು. ಕಮಲ್ ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದರೆ ಒಳ್ಳೆಯದು
ಸುಮಲತಾ, ನಟಿ, ಮಾಜಿ ಸಂಸದೆ
‘ಹಿಂದಿ ಹೇರಿಕೆ ವಿರುದ್ಧ ಒಗ್ಗೂಡಬೇಕಿದೆ’
ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಗಳು ದ್ರಾವಿಡ ಭಾಷೆಯಡಿ ಬರುತ್ತವೆ. ಇವುಗಳಲ್ಲಿ ಸಾಮ್ಯತೆ ಇರಬಹುದೇ ವಿನಾ ಯಾವ ಭಾಷೆಯೂ ಮತ್ತೊಂದು ಭಾಷೆಗಿಂತ ಶ್ರೇಷ್ಠವಲ್ಲ ಎಂದು ನಟಿ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿ ಎಂದುಕೊಂಡಿದ್ದರೆ ಅದೂ ತಪ್ಪು ತಿಳಿವಳಿಕೆ. ಸಂಸ್ಕೃತವು ಇಂಡೋ–ಆರ್ಯನ್‌ಗೆ ಸೇರಿದ್ದಾಗಿದ್ದು, ನಾವು ದ್ರಾವಿಡರು. ಇಂಡೋ–ಆರ್ಯನ್‌ ವಲಸೆಗಿಂತಲೂ ಮೊದಲೇ ನಾವಿಲ್ಲಿ ಇದ್ದೆವು. ಕಮಲ್‌ ಹಾಸನ್‌ ಅವರು ಒಂದು ಬೀಸು ಹೇಳಿಕೆಯನ್ನು ನೀಡಿದ್ದಾರೆ. ಆ ಮಾತ್ರಕ್ಕೆ ಅವರ ಸಿನಿಮಾವನ್ನೇ ನಿಷೇಧಿಸಲು ಮುಂದಾಗಿರುವುದು ತುಸು ಅತಿರೇಕವಲ್ಲವೇ? ಪ್ರಸ್ತುತ ನಾವು ಹಿಂದಿ ಹೇರಿಕೆ ವಿರುದ್ಧ ಒಗ್ಗೂಡಬೇಕಿದೆ. ಇದಕ್ಕಾಗಿ ಮೊದಲು ನಾವು ಪರಸ್ಪರ ಗೌರವ ಕೊಡಬೇಕಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT