ಮಳೆಗಾಲದಲ್ಲಿ ಸುರಿದ ನೀರು ಡಾಂಬರ್ ರಸ್ತೆಯಿಂದ ಹೊರ ಹೋಗದಂತೆ ಕಲ್ಲು, ಮಣ್ಣು ಹಾಕಿದ್ದರಿಂದ ರಸ್ತೆ ಹಾಳಾಗುವ ಅಪಾಯ ಎದುರಾಗಿದೆ. ಇದರ ಜತೆಗೆ ಯಾವುದಾದರೂ ವಾಹನ ರಸ್ತೆಯಲ್ಲಿ ಕೆಟ್ಟರೆ ಅದನ್ನು ಡಾಂಬರ್ ರಸ್ತೆಯಿಂದ ಕೆಳಗಿಳಿಸಿ ರಸ್ತೆಯ ಬದಿಗೆ ನಿಲ್ಲಿಸಲು ಅವಕಾಶವಿಲ್ಲದ ರೀತಿಯಲ್ಲಿ ಕಲ್ಲು ಹಾಕಿರುವುದರಿಂದ ವಾಹನ ಚಾಲಕರು ತೊಂದರೆ ಎದುರಿಸುವಂತಾಗಿದೆ.