ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ಶುಕ್ರವಾರ ಮಾತನಾಡಿರುವ ಸುದೀಪ್, ‘ಒಂದೊಮ್ಮೆ ಶಿವಣ್ಣ ಅವರೇ ಈ ದೃಶ್ಯದ ಕುರಿತು ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿದರೆ ಖಂಡಿತ ನಿರ್ದೇಶಕ ಪ್ರೇಮ್ ಅದನ್ನು ಕತ್ತರಿಸುತ್ತಾರೆ. ನಾವಿಬ್ಬರೂ ಕಥೆಯನ್ನು ಕೇಳಿ ಸಿನಿಮಾ ಮಾಡಿದ್ದೇವೆ. ನಮಗೆ ಇದರಲ್ಲಿ ಆಕ್ಷೇಪ ಏನೂ ಇಲ್ಲ. ಮಿಕ್ಕವರಿಗೆ ಏನಾದರೂ ಸಮಸ್ಯೆ ಇದ್ದರೆ ಅವರೇ ಬಗೆಹರಿಸಿಕೊಳ್ಳಬೇಕು’ ಎಂದೂ ಹೇಳಿದರು.