ಸಹಯಾನ– ಕೆರೆಕೋಣ, ಸಮುದಾಯ– ಕರ್ನಾಟಕ, ಜನಶಕ್ತಿ ಮಾಧ್ಯಮ ಜಂಟಿಯಾಗಿ ಆಯೋಜಿಸಿರುವ ‘ಸತ್ಯಜಿತ್ ರಾಯ್–100’ ಕುರಿತ ವೆಬಿನಾರ್ ಸರಣಿಯ ಎರಡನೇ ಉಪನ್ಯಾಸ ಮಾಲಿಕೆಯಲ್ಲಿ ಭಾನುವಾರ ಅವರು ಮಾತನಾಡಿದರು. ‘ಸತ್ಯಜಿತ್ ರೇ ಅವರ ಸಿನಿಮಾಗಳು ಕೋವಿಡ್ ಕಾಲದ ಬಿಕ್ಕಟ್ಟಿಗೂ ಸ್ಪಂದಿಸುವಂತೆ ಇವೆ. ಲಾಕ್ಡೌನ್ ಅವಧಿಯಲ್ಲಿ ಹಸಿವಿನ ಕಾರಣದಿಂದಾಗಿ ನಡೆದುಹೋದ ಅನೇಕ ಘಟನಾವಳಿಗಳು ಹಲವು ದಶಕಗಳ ಹಿಂದೆ ಬಂದ ಅವರ ಸಿನಿಮಾಗಳಲ್ಲಿ ಕಾಣಬಹುದು’ ಎಂದರು.