ರಾಜಮೌಳಿ ಸಿನಿಮಾಗಳೆಂದರೆ ಅಲ್ಲಿ ನಾಯಕಿಗೆ ಹೆಚ್ಚು ಪ್ರಾಧಾನ್ಯ ಇಲ್ಲ. ನಾಯಕನೇ ಅಲ್ಲಿ ಮುಖ್ಯ ಎಂಬೆಲ್ಲ ಮಾತುಗಳು ಟಾಲಿವುಡ್ನಲ್ಲಿ ಹರಿದಾಡುತ್ತಿದ್ದವು. ಅದು ಸತ್ಯ ಕೂಡ. ಆದರೆ ಅದನ್ನು ಸುಳ್ಳು ಮಾಡಲೇನೋ ಎಂಬಂತೆ ಬಾಹುಬಲಿಯಲ್ಲಿ ಅನುಷ್ಕಾ ಶೆಟ್ಟಿ ಹಾಗೂ ರಮ್ಯಾಕೃಷ್ಣ ಅವರ ಪಾತ್ರಕ್ಕೆ ಒತ್ತು ನೀಡಲಾಗಿತ್ತು. ಆ ಸಿನಿಮಾದಲ್ಲಿ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿ ಅವರಷ್ಟೇ ಪ್ರಾಮುಖ್ಯತೆಯನ್ನು ಅನುಷ್ಕಾ ಹಾಗೂ ರಮ್ಯಾಕೃಷ್ಣ ಅವರಿಗೆ ನೀಡಿದ್ದರು ಮೌಳಿ.