ನಂಜನಗೂಡು: ನಗರದ ಐತಿಹಾಸಿಕ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಬುಧವಾರ ಚಿತ್ರನಟ ಯಶ್–ರಾಧಿಕಾ ಪಂಡಿತ್ ದಂಪತಿ ಬುಧವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.
ಯಶ್ ದಂಪತಿ ತಮ್ಮ ಮಗಳ ಹರಕೆ ಮುಡಿ ಹಾಗೂ ತುಲಾಭಾರ ಸೇವೆ ಸಲ್ಲಿಸಿದರು. ಶ್ರೀಕಂಠೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ವತಿಯಿಂದ ದಂಪತಿಗೆ ಸ್ವಾಮಿಯ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಲಾಯಿತು.
ಯಶ್ ದಂಪತಿ ನೋಡಲು, ಅವರ ಜೊತೆ ಫೋಟೊ ತೆಗಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಅಂಗರಕ್ಷಕರು ತಡೆಗಟ್ಟಿದರು. ಇದರಿಂದ ಅಸಮಾಧಾನಗೊಂಡ ಹಲವರು ಮಾತಿನ ಚಕಮಕಿ ನಡೆಸಿದರು. ಮಧ್ಯಪ್ರವೇಶಿಸಿದ ಯಶ್, ಅಭಿಮಾನಿಗಳನ್ನು ಸಮಾಧಾನಪಡಿಸಿ, ಸೆಲ್ಫಿ ತೆಗೆಸಿಕೊಂಡರು.