ನಿಮ್ಮ ಚಿತ್ರವನ್ನು ಯಾಕೆ ನೋಡಬೇಕು ಎಂಬ ಪ್ರಶ್ನೆಗೆ, ನಿರ್ದೇಶಕ ಶಶಾಂಕ್ ಕೊಡುವ ಮೊದಲ ವಿವರಣೆ ಇವಿಷ್ಟು: `ಯಃಕಶ್ಚಿತ್ ಹುಡುಗಿಯ ಪ್ರೀತಿಗೋ, ದ್ವೇಷಕ್ಕೋ ಆಕ್ಷನ್ ಸನ್ನಿವೇಶಗಳನ್ನು ಮೂಡಿಸದೆ ಸಮಕಾಲೀನ ಸಮಸ್ಯೆಯೊಂದನ್ನು ಹಿನ್ನೆಲೆಯಲ್ಲಿಟ್ಟುಕೊಂಡ ಸಿನಿಮಾ ಇದು. `ಅಂತ~, `ಚಕ್ರವ್ಯೂಹ~ ಹಾಗೂ `ಓಂ~ ಚಿತ್ರಗಳ ವಿಭಾಗಕ್ಕೆ ಇದನ್ನು ಸೇರಿಸಬಹುದು. ತಮಿಳಿನ ಶಂಕರ್ ನಿರ್ದೇಶನದ ಚಿತ್ರಗಳ ಜಾಯಮಾನಕ್ಕೂ ಸಮೀಕರಿಸುವಂಥ ವಸ್ತು. ದುಡ್ಡಿನ ಹಿಂದೆ ಬಿದ್ದು ಲಜ್ಜೆಗೆಟ್ಟಿರುವ ಜನರನ್ನು ನನ್ನ ಸಿನಿಮಾ ಖಂಡಿಸುತ್ತದೆ. ಈ ಎಲ್ಲಾ ಕಾರಣಕ್ಕೆ ಎಲ್ಲಾ ವರ್ಗದವರೂ ವಯೋಮಾನದವರೂ `ಜರಾಸಂಧ~ನನ್ನು ನೋಡಬೇಕು~.