<p>‘ನಿಖಿತಾ ನಿಖಿತಾ’ ಎಂದು ಜನರು ಕೂಗಿದಾಗ ಒಳಗೊಳಗೇ ಖುಷಿಯಾಗುತ್ತದೆ. ಮನಸು 19 ವರ್ಷಗಳ ಹಿಂದೆ ಕರೆದೊಯ್ಯುತ್ತದೆ. ಆಗ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನರು ‘ಶಾಂತಿ ಶಾಂತಿ’ ಎಂದು ಕೂಗುತ್ತಿದ್ದರು. ಟಿ.ವಿ. ಧಾರಾವಾಹಿ ‘24’ರ ಜನಪ್ರಿಯತೆಗೆ ಇದು ಸಾಕ್ಷಿಯಾಗಿದೆ ಎಂದು ಮಂದಿರಾ ಬೇಡಿ ಹೇಳಿಕೊಂಡಿದ್ದಾರೆ.<br /> <br /> ಜನರಿಗೆ ಬದಲಾವಣೆ ಬೇಕಿತ್ತು. ಹೆಣ್ಣುಮಕ್ಕಳನ್ನು ಕೆಟ್ಟವರನ್ನಾಗಿ ತೋರಿಸುವ ಸಾಸ್– ಬಹು (ಅತ್ತೆ–ಸೊಸೆ) ಧಾರಾವಾಹಿಗಿಂತ ಭಿನ್ನವಾಗಿರುವ ಕಾರ್ಯಕ್ರಮಗಳಿಗಾಗಿ ಹಾತೊರೆಯುತ್ತಿದ್ದರು. ಹೀಗಾಗಿ 24 ಧಿಡೀರನೆ ಟಿಆರ್ಪಿ ಲೆಕ್ಕದಲ್ಲಿ ಉತ್ತುಂಗಕ್ಕೇರಿದೆ.<br /> <br /> ಆದರೆ ಪಾತ್ರದ ಹೆಸರಿನಲ್ಲಿ ಜನರು ಕಲಾವಿದರನ್ನು ಗುರುತಿಸಿದಾಗ ಆಗುವ ಸಂತೋಷವೇ ಬೇರೆ. ನನ್ನ ಜೀವನದಲ್ಲಿ ಕೇವಲ ಎರಡು ಸಲ ಆಡಿಶನ್ಗೆ ಹೋಗಿದ್ದು. ಒಂದು 19 ವರ್ಷಗಳ ಹಿಂದೆ; ನಟನೆಯ ಪ್ರಯಾಣ ಆರಂಭಿಸುವಾಗ, ‘ಶಾಂತಿ’ ಧಾರಾವಾಹಿಗಾಗಿ. ಇನ್ನೊಂದು– ಇದೀಗ ಭಿನ್ನ ಕತೆಯೆಂಬ ಕಾರಣಕ್ಕೆ ‘24’ ಧಾರಾವಾಹಿಗೆ. ನಿಖಿತಾ ಪಾತ್ರದ ಜನಪ್ರಿಯತೆ ಕಂಡು ಮೂಕಳಾಗಿದ್ದೇನೆ ಎನ್ನುತ್ತಾರೆ ಅವರು.<br /> <br /> ತಾಯ್ತನದೊಂದಿಗೆ ವೃತ್ತಿ ನಿರ್ವಹಣೆಯ ಬಗ್ಗೆ ಮಾತನಾಡುವಾಗ ಸಹಜವಾಗಿಯೇ ಮಂದಿರಾ ಗದ್ಗದಿತರಾಗುತ್ತಾರೆ. ಮಗ ವೀರ್ ಹುಟ್ಟಿದ ಮೇಲೆ ಇದೇ ಮೊದಲ ಸಲ ರಾತ್ರಿ ಸಮಯದ ಶೂಟಿಂಗ್ಗಾಗಿ ಮನೆಯಿಂದ ಆಚೆ ಕಾಲಿಟ್ಟಿದ್ದಾರೆ ಮಂದಿರಾ.<br /> <br /> ಪ್ರತಿ ರಾತ್ರಿಯೂ ಪುಟ್ಟ ಕೈಗಳ ಅಪ್ಪುಗೆಯೊಂದಿಗೆ ಮಲಗುವ ಮಂದಿರಾಗೆ ಕೆಲವೊಮ್ಮೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ಆಗುವುದೇ ಇಲ್ಲವಂತೆ. ‘ಮಗುವನ್ನು ಬಿಟ್ಟು ಹೊರಗಿದ್ದಾಗಲೇ ಕಷ್ಟ ಏನೆಂದು ಅರಿವಾಗುವುದು. ಈಗ ಮಲಗಿರಬಹುದೆ? ಆಗಾಗ ಕೊರಳು ಮುಟ್ಟಿ ಮುಟ್ಟಿ ನೋಡುವ ಕಾತರ. ಆ ಸ್ಪರ್ಶದ ಮಾಂತ್ರಿಕತೆ ಅಲ್ಲಿದೆಯೇನೋ... ಎಂದು. ಹನಿಕಂಗಳನ್ನು ಮುಚ್ಚಿಡುವುದು ಸುಲಭವೇನಲ್ಲ.<br /> <br /> ಆದರೆ ನಾನೀಗ ಎಲ್ಲವನ್ನೂ ನಿಭಾಯಿಸಬಲ್ಲೆ. ನಮ್ಮ ಅನಿವಾರ್ಯಕ್ಕೆ ಮಕ್ಕಳನ್ನು ತೊರೆಯುವುದು ಕಠಿಣ ಸನ್ನಿವೇಶವೇ ಸರಿ’ ಎನ್ನುತ್ತಾರೆ ಮಂದಿರಾ ಬೇಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಿಖಿತಾ ನಿಖಿತಾ’ ಎಂದು ಜನರು ಕೂಗಿದಾಗ ಒಳಗೊಳಗೇ ಖುಷಿಯಾಗುತ್ತದೆ. ಮನಸು 19 ವರ್ಷಗಳ ಹಿಂದೆ ಕರೆದೊಯ್ಯುತ್ತದೆ. ಆಗ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನರು ‘ಶಾಂತಿ ಶಾಂತಿ’ ಎಂದು ಕೂಗುತ್ತಿದ್ದರು. ಟಿ.ವಿ. ಧಾರಾವಾಹಿ ‘24’ರ ಜನಪ್ರಿಯತೆಗೆ ಇದು ಸಾಕ್ಷಿಯಾಗಿದೆ ಎಂದು ಮಂದಿರಾ ಬೇಡಿ ಹೇಳಿಕೊಂಡಿದ್ದಾರೆ.<br /> <br /> ಜನರಿಗೆ ಬದಲಾವಣೆ ಬೇಕಿತ್ತು. ಹೆಣ್ಣುಮಕ್ಕಳನ್ನು ಕೆಟ್ಟವರನ್ನಾಗಿ ತೋರಿಸುವ ಸಾಸ್– ಬಹು (ಅತ್ತೆ–ಸೊಸೆ) ಧಾರಾವಾಹಿಗಿಂತ ಭಿನ್ನವಾಗಿರುವ ಕಾರ್ಯಕ್ರಮಗಳಿಗಾಗಿ ಹಾತೊರೆಯುತ್ತಿದ್ದರು. ಹೀಗಾಗಿ 24 ಧಿಡೀರನೆ ಟಿಆರ್ಪಿ ಲೆಕ್ಕದಲ್ಲಿ ಉತ್ತುಂಗಕ್ಕೇರಿದೆ.<br /> <br /> ಆದರೆ ಪಾತ್ರದ ಹೆಸರಿನಲ್ಲಿ ಜನರು ಕಲಾವಿದರನ್ನು ಗುರುತಿಸಿದಾಗ ಆಗುವ ಸಂತೋಷವೇ ಬೇರೆ. ನನ್ನ ಜೀವನದಲ್ಲಿ ಕೇವಲ ಎರಡು ಸಲ ಆಡಿಶನ್ಗೆ ಹೋಗಿದ್ದು. ಒಂದು 19 ವರ್ಷಗಳ ಹಿಂದೆ; ನಟನೆಯ ಪ್ರಯಾಣ ಆರಂಭಿಸುವಾಗ, ‘ಶಾಂತಿ’ ಧಾರಾವಾಹಿಗಾಗಿ. ಇನ್ನೊಂದು– ಇದೀಗ ಭಿನ್ನ ಕತೆಯೆಂಬ ಕಾರಣಕ್ಕೆ ‘24’ ಧಾರಾವಾಹಿಗೆ. ನಿಖಿತಾ ಪಾತ್ರದ ಜನಪ್ರಿಯತೆ ಕಂಡು ಮೂಕಳಾಗಿದ್ದೇನೆ ಎನ್ನುತ್ತಾರೆ ಅವರು.<br /> <br /> ತಾಯ್ತನದೊಂದಿಗೆ ವೃತ್ತಿ ನಿರ್ವಹಣೆಯ ಬಗ್ಗೆ ಮಾತನಾಡುವಾಗ ಸಹಜವಾಗಿಯೇ ಮಂದಿರಾ ಗದ್ಗದಿತರಾಗುತ್ತಾರೆ. ಮಗ ವೀರ್ ಹುಟ್ಟಿದ ಮೇಲೆ ಇದೇ ಮೊದಲ ಸಲ ರಾತ್ರಿ ಸಮಯದ ಶೂಟಿಂಗ್ಗಾಗಿ ಮನೆಯಿಂದ ಆಚೆ ಕಾಲಿಟ್ಟಿದ್ದಾರೆ ಮಂದಿರಾ.<br /> <br /> ಪ್ರತಿ ರಾತ್ರಿಯೂ ಪುಟ್ಟ ಕೈಗಳ ಅಪ್ಪುಗೆಯೊಂದಿಗೆ ಮಲಗುವ ಮಂದಿರಾಗೆ ಕೆಲವೊಮ್ಮೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ಆಗುವುದೇ ಇಲ್ಲವಂತೆ. ‘ಮಗುವನ್ನು ಬಿಟ್ಟು ಹೊರಗಿದ್ದಾಗಲೇ ಕಷ್ಟ ಏನೆಂದು ಅರಿವಾಗುವುದು. ಈಗ ಮಲಗಿರಬಹುದೆ? ಆಗಾಗ ಕೊರಳು ಮುಟ್ಟಿ ಮುಟ್ಟಿ ನೋಡುವ ಕಾತರ. ಆ ಸ್ಪರ್ಶದ ಮಾಂತ್ರಿಕತೆ ಅಲ್ಲಿದೆಯೇನೋ... ಎಂದು. ಹನಿಕಂಗಳನ್ನು ಮುಚ್ಚಿಡುವುದು ಸುಲಭವೇನಲ್ಲ.<br /> <br /> ಆದರೆ ನಾನೀಗ ಎಲ್ಲವನ್ನೂ ನಿಭಾಯಿಸಬಲ್ಲೆ. ನಮ್ಮ ಅನಿವಾರ್ಯಕ್ಕೆ ಮಕ್ಕಳನ್ನು ತೊರೆಯುವುದು ಕಠಿಣ ಸನ್ನಿವೇಶವೇ ಸರಿ’ ಎನ್ನುತ್ತಾರೆ ಮಂದಿರಾ ಬೇಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>