ಚಿತ್ರ ಪ್ರಚಾರಕ್ಕೆ ರೈಲು ಯಾನ ಆರಂಭಿಸಿರುವ ಶಾರುಖ್ ಅಭಿಮಾನಿಗಳ ಮಹಾಪೂರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಗುಜರಾತ್ನ ವಡೋದರಾ, ವಾಪಿ, ಸೂರತ್, ವಾಲ್ಸಾದ್, ಕೋಟಾ ನಗರಗಳ ಮೂಲಕ ರೈಲಿನಲ್ಲಿ ಸಂಚರಿಸಿ ಚಿತ್ರ ಪ್ರಚಾರ ನಡೆಸಿದ್ದಾರೆ.
ಕೆಲ ರೈಲು ನಿಲ್ದಾಣಗಳಲ್ಲಿ ಭಾರಿ ಜನಜಂಗುಳಿಯಿಂದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರವು ಬುಧವಾರ ವಿಶ್ವದಾದ್ಯಂತ ತೆರೆ ಕಾಣಲಿದೆ.