<p>ಯೋಗೀಶ್ ನಾಯಕರಾಗಿ ನಟಿಸಿರುವ ಹೊಸ ಚಿತ್ರ `ಜಿಂಕೆ ಮರಿ~ 15 ದಿನಗಳ ಚಿತ್ರೀಕರಣವನ್ನು ಸಕಲೇಶಪುರದಲ್ಲಿ ಮುಗಿಸಿದೆ. `ರಣ~ ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಸೋನಿಯಾ ಗೌಡ ಯೋಗೀಶ್ಗೆ ಜೋಡಿಯಾಗಿದ್ದಾರೆ. `ಜಿಂಕೆ ಮರೀನಾ..~ ಎಂದು ಹಾಡಿ ಕುಣಿದಿದ್ದ ಯೋಗೀಶ್ ಈಗ ಅದೇ ಹಾಡಿನ ಶೀರ್ಷಿಕೆಯುಳ್ಳ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.<br /> <br /> 9 ಟು 12 ಎಂಬ ಸಿನಿಮಾ ನಿರ್ಮಿಸಿದ್ದ ಮಹೇಶ್ ಬಾಳೆಕುಂದ್ರಿ `ಜಿಂಕೆ ಮರಿ~ ನಿರ್ಮಿಸುತ್ತಿದ್ದಾರೆ. ತೆಲುಗಿನ `ಬಿಂದಾಸ್~ ಚಿತ್ರದ ಸ್ಫೂರ್ತಿ ಪಡೆದ ಚಿತ್ರವಿದು. ಪಾತ್ರವೊಂದರಲ್ಲಿ ಅಭಿನಯಿಸಿರುವ ನಿರ್ಮಾಪಕರು `ಮರುಭೂಮಿಯಾಗಿದೆ ನಿನ್ನ ಮನಸ್ಸು~ ಹಾಡನ್ನೂ ಹಾಡಿದ್ದಾರೆ.<br /> <br /> ವಿಜಯ್ ಗುಜ್ಜಾರ್, ಬುಕ್ಕಾಪಟ್ಟಣ ವಾಸು ಮುಂತಾದವರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದಿದ್ದ ಕೆ.ಪಿ.ನವೀನ್ಕುಮಾರ್ ಮೊದಲ ಬಾರಿಗೆ ಸ್ವತಂತ್ರವಾಗಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಾಯಿ ಕಾರ್ತಿಕ್ ಸ್ವರ ಸಂಯೋಜನೆ, ವೀನಸ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.<br /> <br /> ಒಂದನೇ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮೇ ಮೊದಲ ವಾರದಿಂದ ದ್ವಿತೀಯ ಹಂತದ ಚಿತ್ರೀಕರಣ ನಡೆಸಲಿದೆ. ಅವಿನಾಶ್, ಶರತ್ ಲೋಹಿತಾಶ್ವ, ಶೋಭರಾಜ್, ರಮೇಶ್ ಭಟ್, ಜೈಜಗದೀಶ್, ಹರೀಶ್ ರಾಯ್, ಅಚ್ಯುತರಾವ್, ಶರಣ್, ಬುಲೆಟ್ ಪ್ರಕಾಶ್ ತಾರಾಗಣದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯೋಗೀಶ್ ನಾಯಕರಾಗಿ ನಟಿಸಿರುವ ಹೊಸ ಚಿತ್ರ `ಜಿಂಕೆ ಮರಿ~ 15 ದಿನಗಳ ಚಿತ್ರೀಕರಣವನ್ನು ಸಕಲೇಶಪುರದಲ್ಲಿ ಮುಗಿಸಿದೆ. `ರಣ~ ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಸೋನಿಯಾ ಗೌಡ ಯೋಗೀಶ್ಗೆ ಜೋಡಿಯಾಗಿದ್ದಾರೆ. `ಜಿಂಕೆ ಮರೀನಾ..~ ಎಂದು ಹಾಡಿ ಕುಣಿದಿದ್ದ ಯೋಗೀಶ್ ಈಗ ಅದೇ ಹಾಡಿನ ಶೀರ್ಷಿಕೆಯುಳ್ಳ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.<br /> <br /> 9 ಟು 12 ಎಂಬ ಸಿನಿಮಾ ನಿರ್ಮಿಸಿದ್ದ ಮಹೇಶ್ ಬಾಳೆಕುಂದ್ರಿ `ಜಿಂಕೆ ಮರಿ~ ನಿರ್ಮಿಸುತ್ತಿದ್ದಾರೆ. ತೆಲುಗಿನ `ಬಿಂದಾಸ್~ ಚಿತ್ರದ ಸ್ಫೂರ್ತಿ ಪಡೆದ ಚಿತ್ರವಿದು. ಪಾತ್ರವೊಂದರಲ್ಲಿ ಅಭಿನಯಿಸಿರುವ ನಿರ್ಮಾಪಕರು `ಮರುಭೂಮಿಯಾಗಿದೆ ನಿನ್ನ ಮನಸ್ಸು~ ಹಾಡನ್ನೂ ಹಾಡಿದ್ದಾರೆ.<br /> <br /> ವಿಜಯ್ ಗುಜ್ಜಾರ್, ಬುಕ್ಕಾಪಟ್ಟಣ ವಾಸು ಮುಂತಾದವರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದಿದ್ದ ಕೆ.ಪಿ.ನವೀನ್ಕುಮಾರ್ ಮೊದಲ ಬಾರಿಗೆ ಸ್ವತಂತ್ರವಾಗಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಾಯಿ ಕಾರ್ತಿಕ್ ಸ್ವರ ಸಂಯೋಜನೆ, ವೀನಸ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.<br /> <br /> ಒಂದನೇ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮೇ ಮೊದಲ ವಾರದಿಂದ ದ್ವಿತೀಯ ಹಂತದ ಚಿತ್ರೀಕರಣ ನಡೆಸಲಿದೆ. ಅವಿನಾಶ್, ಶರತ್ ಲೋಹಿತಾಶ್ವ, ಶೋಭರಾಜ್, ರಮೇಶ್ ಭಟ್, ಜೈಜಗದೀಶ್, ಹರೀಶ್ ರಾಯ್, ಅಚ್ಯುತರಾವ್, ಶರಣ್, ಬುಲೆಟ್ ಪ್ರಕಾಶ್ ತಾರಾಗಣದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>