ಬೆಂಗಳೂರಿನಲ್ಲಿ ಕೆಲಸ ಮಾಡುವ ‘ಪೃಥ್ವಿ’(ಆದಿತ್ಯ) ಎಂಬ ಇನ್ಸ್ಪೆಕ್ಟರ್ಗೆ ಚಿಕ್ಕಮಗಳೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗುತ್ತದೆ. ಆತನ ಪತ್ನಿ ‘ಮೇಘನಾ’(ರಂಜನಿ ರಾಘವನ್) ಆಸ್ಪತ್ರೆಯೊಂದರಲ್ಲಿ ಮನಃಶಾಸ್ತ್ರಜ್ಞೆ. ಚಿಕ್ಕಮಗಳೂರಿನ ‘ಆಂಟನಿ ಕಾಟೇಜ್’ ಎಂಬ ಹೋಂಸ್ಟೇಯಲ್ಲಿ ನಡೆಯುವ ಆತ್ಮಹತ್ಯೆಯ ಘಟನೆಯೊಂದು ಕಥೆಗೆ ಮುನ್ನುಡಿ ಬರೆಯುತ್ತದೆ. ನಂತರದಲ್ಲಿ ಈ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ ದಂಪತಿಗಳಿಗೆ ದೆವ್ವದ ಕಾಟ. ಆ ದೆವ್ವವನ್ನು ಕಂಡವರು ತಮ್ಮ ಊರಿಗೆ ಮರಳಿದ ಕೆಲವೇ ದಿನಗಳನ್ನು ನಾಪತ್ತೆಯಾಗುತ್ತಾರೆ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಎಪ್ಪತ್ತು ಪ್ರಕರಣಗಳ ತನಿಖಾಧಿಕಾರಿಯಾಗಿ ಅವುಗಳ ಜಾಡು ಹಿಡಿದು ಹೊರಟ ಪೃಥ್ವಿ ಎದುರಿಸುವ ಸನ್ನಿವೇಶಗಳು, ಕಂಡುಕೊಳ್ಳುವ ಸತ್ಯಗಳೇ ಚಿತ್ರದ ಕಥೆ.