ಸೋಮವಾರ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಟಿ.ಎಂ. ಹೊಸೂರು ಗೇಟ್ ಬಳಿ ಸುದೀಪ್ ಅವರನ್ನು ರಾಘವ ಹಾಗೂ ಅವರ ಗೆಳೆಯರು ಭೇಟಿಯಾದರು. ಈ ವೇಳೆ, ರಾಘವ ಅವರ ಆರೋಗ್ಯ ವಿಚಾರಿಸಿದ ಸುದೀಪ್, ‘ಎದೆಗುಂದಬೇಡಿ. ನಿಮ್ಮ ಕಾಲನ್ನು ಸರಿಪಡಿಸುವ ಜವಾಬ್ದಾರಿ ನನ್ನದು. ಧೈರ್ಯದಿಂದಿರಿ’ ಎಂದು ಧೈರ್ಯ ತುಂಬಿದರು.