45, 60, 75 ಹಾಗೂ 90 ನಿಮಿಷಗಳ ಪ್ರಸ್ತುತಿ ಇದು. ರಾಕೇಶ್ ಬೇಡಿ ಅವರು ರಂಗರೂಪಕ್ಕೆ ತಂದ ಈ ಪ್ರಸ್ತುತಿಯಲ್ಲಿ 15–20 ಪಾತ್ರಗಳು ಬಂದು ಹೋಗುತ್ತವೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಚಿತ್ರನಟನಾಗುವ ಆಸೆಯಿಂದ ಬಂದ ಆನಂದ ಕುಮಾರ್, ಹ್ಯಾಪ್ಪಿ ಕುಮಾರ್ ಆಗಿ ಬದಲಾಗುವ ಪ್ರಕ್ರಿಯೆ ನಾಟಕದ ವಸ್ತುವಾಗಿದೆ. ಎರಡು ನಗರಗಳ ಜೀವನ, ಬಣ್ಣದ ಬದುಕು, ಮಾನವ ಸಹಜ ಗುಣಗಳಾದ ಪ್ರತಿಷ್ಠೆ, ಗೌರವ, ಅಹಂಕಾರ ಮುಂತಾದ ಹತ್ತುಹಲವು ಭಾವಾತಿರೇಕಗಳು ತೆಳುಹಾಸ್ಯದ ಪರದೆ ಹೊದ್ದು ಬಂದು ಹೋಗುತ್ತವೆ ಎಂದು ನಾಟಕದ ವಿಷಯವಸ್ತುವನ್ನು ವಿವರಿಸಿದರು.