ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇತ್ತೀಚೆಗೆ ವಿಶೇಷ ಪೂಜೆ ನಡೆಯಿತು. ಮುಖ್ಯಪ್ರಾಣ ದೇವರಿಗೆ ಜೇನುತುಪ್ಪದಿಂದ ಮಧು ಅಭಿಷೇಕ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಸುಮಧ್ವ ವಿಜಯ ಪಾರಾಯಣ ಹಾಗೂ ಪವಮಾನ ಹೋಮ, ಮಧ್ವಾಚಾರ್ಯರ ಭಾವಚಿತ್ರದೊಂದಿಗೆ ಸ್ವರ್ಣ ಲೇಪಿತ ಗಜವಾಹನದ ಮೆರವಣಿಗೆ, ಕನಕಾಭಿಷೇಕ ರಥೋತ್ಸವ ಮತ್ತು ಅನ್ನ ಸಂತರ್ಪಣೆ ಇತ್ತು.ಸಂಜೆ ’ಪ್ರಜ್ಞಾ ಶ್ರೀಧರ್‘ ವೃಂದದವರಿಂದ ಆರ್. ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಿತು.