<p>ಖ್ಯಾತ ಕಥೆಗಾರ, ನಾಟಕಕಾರ ಸಾಗರ್ ಸರ್ಹದಿ ಅವರ ಸ್ಮರಣಾರ್ಥ ಕಟ್ಪುಥಲಿಯಾ ರಂಗ ತಂಡವು ‘ದಸ್ತಕ್: ಮೂರು ಸಣ್ಣ ಕಥೆಗಳ ಸಂಗ್ರಹ’ ಎನ್ನುವ ಮೂರು ನಾಟಕಗಳ ಪ್ರದರ್ಶನವನ್ನು ಇದೇ 14 ಮತ್ತು 15ರಂದು ರಂಗಶಂಕರದಲ್ಲಿ ಆಯೋಜಿಸಿದೆ. ನಾಟಕಗಳನ್ನು ಜಾಫರ್ ಮೊಹಿಯುದ್ದೀನ್ ಅವರು ನಿರ್ದೇಶಿಸಿದ್ದಾರೆ.</p>.<p>ಸಾಗರ್ ಸರ್ಹದಿ ಅವರು ಭಾರತದ ವಿಭಜನೆಯ ನೋವನ್ನು ಉಂಡವರು. ವಿಭಜನೆಯ ನೋವು, ಸಂಕಟ ಅವರ ಬರಹಗಳಲ್ಲೂ ಪ್ರತಿಫಲಿತವಾಗಿದೆ. ಈ ಮೂರು ನಾಟಕಗಳ ಕಥಾವಸ್ತು ಕೂಡ ವಿಭಜನೆಗೆ ಸಂಬಂಧಿಸಿದವು.</p>.<p><strong>1. ಮಿರ್ಜಾ ಸಾಹೇಬ್: </strong>ಜನರ ಒಲವು ಇಲ್ಲದಿದ್ದರೂ, ಧರ್ಮವು ಹೇಗೆ ಸಾಮಾನ್ಯ ಜನರ ಮಧ್ಯೆ ಒಂದು ಕಂದಕವನ್ನು ಸೃಷ್ಟಿ ಮಾಡುತ್ತದೆ. ಒಬ್ಬರನ್ನೊಬ್ಬರು ದ್ವೇಷಿಸುವಂತೆ ಮಾಡುತ್ತದೆ ಎಂಬುದರ ಕುರಿತು ಈ ನಾಟಕವಿದೆ.</p>.<p><strong>2. ಕಿಸಿ ಸೀಮಾ ಕಿ ಏಕ್ ಮಾಮೂಲಿ ಸಿ ಘಟ್ನಾ: </strong>ಒಂದು ದೇಶದ ಗಡಿ ಭಾಗದಲ್ಲಿ ನಡೆಯುವ ಒಂದು ಮಾಮೂಲಿ ಸಣ್ಣ ಘಟನೆ ಅಧಿಕಾರದ ಪ್ರವೇಶದಿಂದಾಗಿ ಹೇಗೆ ಬೇರೆ ಬೇರೆ ಬಣ್ಣ ಪಡೆದುಕೊಳ್ಳುತ್ತದೆ, ಒಂದು ವ್ಯವಸ್ಥೆಯನ್ನು ಹೇಗೆ ಅದು ಘಾಸಿಗೊಳಿಸುತ್ತದೆ ಮತ್ತು ಇದರ ಪರಿಣಾಮವಾಗಿ ಮಾನವೀಯತೆ ಹೇಗೆ ಸತ್ತು ಹೋಗುತ್ತದೆ ಎನ್ನುವುದರ ಕುರಿತು ಈ ನಾಟಕವಿದೆ.</p>.<p><strong>3. ಖಯಾಲ್ ಕಿ ದಸ್ತಕ್: </strong>ಬೇರೆಯವರೊಂದಿಗೆ ಮದುವೆ ಆಗಿದ್ದ ಪ್ರೇಯಸಿಯನ್ನು, ಮಾಜಿ ಪ್ರಿಯಕರನೊಬ್ಬ ವರ್ಷಗಳ ನಂತರ ಭೇಟಿ ಮಾಡುವ ಕಥಾಹಂದರ ಇದರಲ್ಲಿದೆ.</p>.<p><strong>ಸ್ಥಳ: </strong>ರಂಗಶಂಕರ, 8ನೇ ತಿರುವು, ಆರ್.ಕೆ ಕಾಲೊನಿ, 2ನೇ ಹಂತ, ಜೆ.ಪಿ.ನಗರ</p>.<p><strong>ದಿನಾಂಕ</strong>: 14 ಮತ್ತು 15ನೇ ಅಕ್ಟೋಬರ್, 2021</p>.<p><strong>ಸಮಯ</strong>: ಸಂಜೆ 7ಕ್ಕೆ</p>.<p><strong>ದರ</strong>: ₹250, bookmyshowನಲ್ಲೂ ಟಿಕೆಟ್ ಅನ್ನು ಕಾಯ್ದಿರಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖ್ಯಾತ ಕಥೆಗಾರ, ನಾಟಕಕಾರ ಸಾಗರ್ ಸರ್ಹದಿ ಅವರ ಸ್ಮರಣಾರ್ಥ ಕಟ್ಪುಥಲಿಯಾ ರಂಗ ತಂಡವು ‘ದಸ್ತಕ್: ಮೂರು ಸಣ್ಣ ಕಥೆಗಳ ಸಂಗ್ರಹ’ ಎನ್ನುವ ಮೂರು ನಾಟಕಗಳ ಪ್ರದರ್ಶನವನ್ನು ಇದೇ 14 ಮತ್ತು 15ರಂದು ರಂಗಶಂಕರದಲ್ಲಿ ಆಯೋಜಿಸಿದೆ. ನಾಟಕಗಳನ್ನು ಜಾಫರ್ ಮೊಹಿಯುದ್ದೀನ್ ಅವರು ನಿರ್ದೇಶಿಸಿದ್ದಾರೆ.</p>.<p>ಸಾಗರ್ ಸರ್ಹದಿ ಅವರು ಭಾರತದ ವಿಭಜನೆಯ ನೋವನ್ನು ಉಂಡವರು. ವಿಭಜನೆಯ ನೋವು, ಸಂಕಟ ಅವರ ಬರಹಗಳಲ್ಲೂ ಪ್ರತಿಫಲಿತವಾಗಿದೆ. ಈ ಮೂರು ನಾಟಕಗಳ ಕಥಾವಸ್ತು ಕೂಡ ವಿಭಜನೆಗೆ ಸಂಬಂಧಿಸಿದವು.</p>.<p><strong>1. ಮಿರ್ಜಾ ಸಾಹೇಬ್: </strong>ಜನರ ಒಲವು ಇಲ್ಲದಿದ್ದರೂ, ಧರ್ಮವು ಹೇಗೆ ಸಾಮಾನ್ಯ ಜನರ ಮಧ್ಯೆ ಒಂದು ಕಂದಕವನ್ನು ಸೃಷ್ಟಿ ಮಾಡುತ್ತದೆ. ಒಬ್ಬರನ್ನೊಬ್ಬರು ದ್ವೇಷಿಸುವಂತೆ ಮಾಡುತ್ತದೆ ಎಂಬುದರ ಕುರಿತು ಈ ನಾಟಕವಿದೆ.</p>.<p><strong>2. ಕಿಸಿ ಸೀಮಾ ಕಿ ಏಕ್ ಮಾಮೂಲಿ ಸಿ ಘಟ್ನಾ: </strong>ಒಂದು ದೇಶದ ಗಡಿ ಭಾಗದಲ್ಲಿ ನಡೆಯುವ ಒಂದು ಮಾಮೂಲಿ ಸಣ್ಣ ಘಟನೆ ಅಧಿಕಾರದ ಪ್ರವೇಶದಿಂದಾಗಿ ಹೇಗೆ ಬೇರೆ ಬೇರೆ ಬಣ್ಣ ಪಡೆದುಕೊಳ್ಳುತ್ತದೆ, ಒಂದು ವ್ಯವಸ್ಥೆಯನ್ನು ಹೇಗೆ ಅದು ಘಾಸಿಗೊಳಿಸುತ್ತದೆ ಮತ್ತು ಇದರ ಪರಿಣಾಮವಾಗಿ ಮಾನವೀಯತೆ ಹೇಗೆ ಸತ್ತು ಹೋಗುತ್ತದೆ ಎನ್ನುವುದರ ಕುರಿತು ಈ ನಾಟಕವಿದೆ.</p>.<p><strong>3. ಖಯಾಲ್ ಕಿ ದಸ್ತಕ್: </strong>ಬೇರೆಯವರೊಂದಿಗೆ ಮದುವೆ ಆಗಿದ್ದ ಪ್ರೇಯಸಿಯನ್ನು, ಮಾಜಿ ಪ್ರಿಯಕರನೊಬ್ಬ ವರ್ಷಗಳ ನಂತರ ಭೇಟಿ ಮಾಡುವ ಕಥಾಹಂದರ ಇದರಲ್ಲಿದೆ.</p>.<p><strong>ಸ್ಥಳ: </strong>ರಂಗಶಂಕರ, 8ನೇ ತಿರುವು, ಆರ್.ಕೆ ಕಾಲೊನಿ, 2ನೇ ಹಂತ, ಜೆ.ಪಿ.ನಗರ</p>.<p><strong>ದಿನಾಂಕ</strong>: 14 ಮತ್ತು 15ನೇ ಅಕ್ಟೋಬರ್, 2021</p>.<p><strong>ಸಮಯ</strong>: ಸಂಜೆ 7ಕ್ಕೆ</p>.<p><strong>ದರ</strong>: ₹250, bookmyshowನಲ್ಲೂ ಟಿಕೆಟ್ ಅನ್ನು ಕಾಯ್ದಿರಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>