ಬೆಂಗಳೂರು ಥಿಯೇಟರ್ ಆನ್ಸಂಬಲ್ ಅಭಿನಯಿಸುವ ಆ್ಯಂಟನ್ ಚೆಕಾವ್ ಕಥೆಗಳ ಆಧರಿತ ‘ಚೆಕಾವ್ ಟು ಶಾಂಪೇನ್’ ನಾಟಕ ನಾಳೆ (ಭಾನುವಾರ) ಸಂಜೆ 7 ಗಂಟೆಗೆ ಕನಕಪುರ ರಸ್ತೆಯಲ್ಲಿರುವ ದೊಡ್ಡಕಲ್ಲಸಂದ್ರದ ಶಂಕರ ಫೌಂಡೇಷನ್ನ ಡಮರು ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ.
ತಿಳಿ ಹಾಸ್ಯ, ಲವಲವಿಕೆ, ವಿನೋದಗಳಿಂದ ಪ್ರಾರಂಭವಾಗುವ ಈ ನಾಟಕ ಬದುಕಿನಲ್ಲಿ ಅನುಭವಿಸುವ ಕ್ಷುದ್ರತೆ, ಅನ್ಯಾಯ, ಜಿಗುಪ್ಸೆಯನ್ನು ಸೂಕ್ಷ್ಮವಾಗಿ, ತೀಕ್ಷ್ಣವಾಗಿ ವಿವೇಚಿಸಿ, ವಿಡಂಬಿಸುತ್ತಾ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ.
ನಾಟಕ: ಚೆಕಾವ್ ಟು ಶಾಂಪೇನ್, ರಚನೆ: ಡಾ. ಹೇಮಾ ಪಟ್ಟಣಶೆಟ್ಟಿ ವಿನ್ಯಾಸ ಮತ್ತು ನಿರ್ದೇಶನ: ಅಭಿಮನ್ಯು ಭೂಪತಿ, ಸ್ಥಳ: ಶಂಕರ ಫೌಂಡೇಷನ್,ದೊಡ್ಡಕಲ್ಲಸಂದ್ರ, ಕನಕಪುರ ರಸ್ತೆ. ಸಮಯ: ಸಂಜೆ 7ಕ್ಕೆ