ಬೆಂಗಳೂರಿನ ರಾಬರ್ಟ್ ಭಾಷ್ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ವಿಶ್ವಾಸ್ ಪ್ರತಿಕ್ರಿಯಿಸಿ, ‘ಮನೆಯಿಂದಲೇ ಕೆಲಸ ಮಾಡುವಂತಹ ಅವಕಾಶ ಸಿಕ್ಕಿದ ಮೇಲೆ ಮನೆಯಲ್ಲಿದ್ದು ಸಾಕಾಯಿತು. ರಂಗಾಯಣ ಶಿಬಿರದ ಮಾಹಿತಿ ತಿಳಿದು ಬೆಂಗಳೂರಿನಿಂದ ಇಲ್ಲಿಗೆ ಬಂದು ತಂದೆ, ತಾಯಿ ಜತೆ ನೆಲೆಸಿದೆ. ಬೆಳಿಗ್ಗೆ ಹೊತ್ತು ಕೆಲಸ ಮಾಡಿ ಸಂಜೆ ವೇಳೆಗೆ ತರಬೇತಿ ಪಡೆದೆ. ನಿಜಕ್ಕೂ ವರ್ಕ್ ಫ್ರಮ್ ಹೋಮ್ ಇರದೇ ಹೋಗಿದ್ದರೆ ಈ ಅವಕಾಶ ಸಿಕ್ಕುತ್ತಿರಲಿಲ್ಲ’ ಎಂದು ತಿಳಿಸಿದರು.