ಶತ್ರುಘ್ನನಾಗಿ ಶ್ರೀಹರಿ ಸರಳಾಯ ಹಾಗೂ ವೀರಮಣಿಯಾಗಿ ಸುಧನ್ವಭಟ್ ಮುಖ್ಯಪಾತ್ರದಲ್ಲಿ ಮಿಂಚಿದರು. ಧೀರ ರಾಣಿಯರಾದ ಮದನಾಕ್ಷಿ, ತಾರಾವಳಿ ಪಾತ್ರದಲ್ಲಿ ಧ್ರುತಿ ಅಮ್ಮೆಂಬಳ ಹಾಗೂ ರಮ್ಯಶ್ರೀ ಪಾತ್ರ ನಿರ್ವಹಿಸಿದರು. ಹಾಸ್ಯದಲ್ಲಿ ರಘು ರಂಜಿಸಿದರು. ರಾಮಾಶ್ವಮೇಧ ಸೇನೆಯಲ್ಲಿ ಚಂದ್ರಕೇತುವಾಗಿ ಕೃಷ್ಣಭಟ್, ದಮನನಾಗಿ ಸಿದ್ದಾರ್ಥ, ಪುಷ್ಕಳನಾಗಿ ಶ್ರೀವತ್ಸ ಸರಳಾಯ ರಂಜಿಸಿದರು. ಈಶ್ವರನಾಗಿ ಶ್ರೀನಿಧಿ ಶರ್ಮ, ನಾರದನಾಗಿ ಆಯುಶ್ ಎಸ್., ಸೇನಾ ನಾಯಕನಾಗಿ ಸುಶಾಂತ್ ಶರ್ಮ, ಶುಭಾಂಗ, ರುಕ್ಮಾಂಗರಾಗಿ ಶ್ರೇಯಸ್ ಸರಳಾಯ ಹಾಗೂ ಆದಿತ್ಯ ಸರಳಾಯ ಗಮನ ಸೆಳೆದರು. ಕೃಷ್ಣಭಟ್, ಅದಿತಿ, ಸೃಷ್ಟಿ ರಂಗ ಚಾಲನೆ ನೀಡಿದರು. ಭಾಗವತರಾಗಿ ವಿಶ್ವನಾಥ ಶೆಟ್ಟಿ, ಮೃದಂಗದಲ್ಲಿ ರಾಘವೇಂದ್ರ ಬದುವಾಳ, ಚಂಡೆಯಲ್ಲಿ ಅಜಿತ್ಕುಮಾರ್ ಸಾಥ್ ನೀಡಿದರು.