<p>ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಮಹಾದೇವಿ’ ಧಾರಾವಾಹಿಯು ಹೊಸ ತಿರುವು ಪಡೆದುಕೊಳ್ಳುತ್ತಿದೆ. 900 ಸಂಚಿಕೆಗಳನ್ನು ಪೂರೈಸಿರುವ ಈ ಧಾರಾವಾಹಿಯಲ್ಲಿ ಪುಟಾಣಿ ಹಿರಣ್ಮಯಿಯ ಅಧ್ಯಾಯ ಮುಕ್ತಾಯಗೊಳ್ಳುತ್ತಿದೆಯಂತೆ. ಸೋಮವಾರದಿಂದ 20 ವರ್ಷದ ತರುಣಿ ಹಿರಣ್ಮಯಿಯ ಪ್ರವೇಶವಾಗುತ್ತಿದೆ. ಮಾತ್ರವಲ್ಲ ಹಳೆಯ ಕಥೆ ಹಾಗೂ ಪಾತ್ರಗಳ ಪರ್ವ ಮುಗಿದು ಹೊಸ ಪಾತ್ರಗಳು ತೆರೆದುಕೊಳ್ಳಲಿವೆಯಂತೆ.</p>.<p>ತನ್ನವರನ್ನೆಲ್ಲ ಕಳೆದುಕೊಂಡ ಪುಟ್ಟ ಹಿರಣ್ಮಯಿಯು ಒಂಟಿಯಾಗಿ ಊರು ಬಿಟ್ಟು ದೂರ ಹೋಗುತ್ತಾಳೆ. ಅರ್ಚಕರೊಬ್ಬರ ನೆರವಿನಿಂದ ಅಪಾಯಕಾರಿ ಸರ್ಪವನ ದಾಟುತ್ತಾಳೆ. ಕಾಡುದಾರಿಯಲ್ಲಿ ಮುಳ್ಳು ಚುಚ್ಚಿ ತೊಂದರೆ ಅನುಭವಿಸುತ್ತಿದ್ದ ಆನೆ ಮರಿಯನ್ನು ಕಂಡು, ಅದರ ಕಾಲಿಗೆ ಚುಚ್ಚಿದ್ದ ಮುಳ್ಳು ತೆಗೆದು ಉಪಚರಿಸುತ್ತಾಳೆ. ಆ ಆನೆ ಮರಿಯು ಆಕೆಯನ್ನು ಹಿಂಬಾಲಿಸಿ ಬರುತ್ತದೆ. ದೂರ ದಾರಿಯನ್ನು ಕ್ರಮಿಸಿ ಹಿರಣ್ಮಯಿಯು ಮೂಕಾಂಬಿಕೆ ದೇವಸ್ಥಾನಕ್ಕೆ ಬರುತ್ತಾಳೆ. ಅಲ್ಲಿ ಭಕ್ತಿಪರವಶಳಾಗಿ ಹಾಡುತ್ತಾಳೆ. ಆಕೆಯ ಗಾನ ಮಾಧುರ್ಯಕ್ಕೆ ಮನಸೋತ ಆ ದೇಗುಲದ ನಾದಸ್ವರ ವಾದಕ ವರದರಾಜ, ಆಕೆಯನ್ನು ದತ್ತುಪಡೆದು ಸಾಕುತ್ತಾರೆ. ತಮ್ಮ ಸಂಗೀತ ಜ್ಞಾನವನ್ನು ಧಾರೆ ಎರೆಯುತ್ತಾರೆ. ಬೆಳೆದು ದೊಡ್ಡವಳಾಗುತ್ತ ಹಿರಣ್ಮಯಿಯು ನಾದಸ್ವರ ವಾದಕಿಯಾಗಿ ಹೆಸರು ಗಳಿಸುತ್ತಾಳೆ.</p>.<p>ಹಿರಣ್ಮಯಿಯನ್ನು ಹಿಂಬಾಲಿಸಿ ಬಂದ ಆನೆಮರಿಯೂ ಅದೇ ದೇವಸ್ಥಾನದಲ್ಲಿ ಬೆಳೆದು, ಹಿರಣ್ಮಯಿಯ ಸುಖ ದುಃಖ ಹಂಚಿಕೊಳ್ಳುವ ಸ್ನೇಹಿತನಾಗಿ, ಕಾಪಾಡುವ ಸೋದರನಾಗಿ ದೇವಸ್ಥಾನದ ಆನೆಯಾಗಿ, ಹಿರಣ್ಮಯಿಯ ಜೀವನದ ಏಳುಬೀಳುಗಳಿಗೆ ಮೂಕಸಾಕ್ಷಿಯಾಗಿರುತ್ತದೆ. ಕಥೆ ಹೀಗೆ ಹೊಸ ಹೊಸ ಅಧ್ಯಾಯಗಳಲ್ಲಿ ತೆರೆದುಕೊಳ್ಳಲಿದೆಯಂತೆ.</p>.<p>ತರುಣಿ ಹಿರಣ್ಮಯಿಯ ಪಾತ್ರದಲ್ಲಿ ಹೊಸ ನಟಿ ಗಗನಾ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕ ಸೂರ್ಯನ ಪಾತ್ರದಲ್ಲಿ ವಿವೇಕ್ ಸಿಂಹ, ಸಾಕುತಂದೆ ವರದರಾಜ್ ಪಾತ್ರದಲ್ಲಿ ರಂಗನಟ ಧರ್ಮೇಂದ್ರ ಅರಸ್ ನಟಿಸುತ್ತಿದ್ದಾರೆ. ಇದಲ್ಲದೆ ದೊಡ್ಡ ತಾರಾಗಣವೇ ‘ಮಹಾದೇವಿ’ ಧಾರಾವಾಹಿಯಲ್ಲಿದೆ.</p>.<p>‘ಜೀ ಕನ್ನಡದ ಧಾರಾವಾಹಿಗಳಲ್ಲಿ ‘ಮಹಾದೇವಿ’ ತನ್ನದೇ ಛಾಪು ಮೂಡಿಸಿದೆ. ವೀಕ್ಷಕರ ಭಾವನೆಗಳನ್ನು ಅರಿತು ಹಿರಣ್ಮಯಿಯ ಕಥೆಯನ್ನು ಮುಂದುವರಿಸಲು ವಾಹಿನಿ ನಿರ್ಧರಿಸಿತು’ ಎನ್ನುತ್ತಾರೆ ಚಾನೆಲ್ನ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು.</p>.<p>‘ಮಹಾದೇವಿ ಧಾರಾವಾಹಿಯನ್ನು ಹೊಸ ರೂಪದಲ್ಲಿ ಕಟ್ಟಿಕೊಡುವುದು ಒಂದು ಸವಾಲಿನ ಕೆಲಸ. ಈ ಸವಾಲನ್ನು ಎದುರಿಸಿ ವೀಕ್ಷಕರ ಮನ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ನಿರ್ದೇಶಕ ರಮೇಶ್ ಇಂದಿರಾ. ಸೋಮವಾರದಿಂದ (ಫೆ. 4) ಶುಕ್ರವಾರದವರೆಗೆ ರಾತ್ರಿ 8:30 ಕ್ಕೆ ಹೊಸ ರೂಪದಲ್ಲಿ ‘ಮಹಾದೇವಿ’ ಪ್ರಸಾರವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಮಹಾದೇವಿ’ ಧಾರಾವಾಹಿಯು ಹೊಸ ತಿರುವು ಪಡೆದುಕೊಳ್ಳುತ್ತಿದೆ. 900 ಸಂಚಿಕೆಗಳನ್ನು ಪೂರೈಸಿರುವ ಈ ಧಾರಾವಾಹಿಯಲ್ಲಿ ಪುಟಾಣಿ ಹಿರಣ್ಮಯಿಯ ಅಧ್ಯಾಯ ಮುಕ್ತಾಯಗೊಳ್ಳುತ್ತಿದೆಯಂತೆ. ಸೋಮವಾರದಿಂದ 20 ವರ್ಷದ ತರುಣಿ ಹಿರಣ್ಮಯಿಯ ಪ್ರವೇಶವಾಗುತ್ತಿದೆ. ಮಾತ್ರವಲ್ಲ ಹಳೆಯ ಕಥೆ ಹಾಗೂ ಪಾತ್ರಗಳ ಪರ್ವ ಮುಗಿದು ಹೊಸ ಪಾತ್ರಗಳು ತೆರೆದುಕೊಳ್ಳಲಿವೆಯಂತೆ.</p>.<p>ತನ್ನವರನ್ನೆಲ್ಲ ಕಳೆದುಕೊಂಡ ಪುಟ್ಟ ಹಿರಣ್ಮಯಿಯು ಒಂಟಿಯಾಗಿ ಊರು ಬಿಟ್ಟು ದೂರ ಹೋಗುತ್ತಾಳೆ. ಅರ್ಚಕರೊಬ್ಬರ ನೆರವಿನಿಂದ ಅಪಾಯಕಾರಿ ಸರ್ಪವನ ದಾಟುತ್ತಾಳೆ. ಕಾಡುದಾರಿಯಲ್ಲಿ ಮುಳ್ಳು ಚುಚ್ಚಿ ತೊಂದರೆ ಅನುಭವಿಸುತ್ತಿದ್ದ ಆನೆ ಮರಿಯನ್ನು ಕಂಡು, ಅದರ ಕಾಲಿಗೆ ಚುಚ್ಚಿದ್ದ ಮುಳ್ಳು ತೆಗೆದು ಉಪಚರಿಸುತ್ತಾಳೆ. ಆ ಆನೆ ಮರಿಯು ಆಕೆಯನ್ನು ಹಿಂಬಾಲಿಸಿ ಬರುತ್ತದೆ. ದೂರ ದಾರಿಯನ್ನು ಕ್ರಮಿಸಿ ಹಿರಣ್ಮಯಿಯು ಮೂಕಾಂಬಿಕೆ ದೇವಸ್ಥಾನಕ್ಕೆ ಬರುತ್ತಾಳೆ. ಅಲ್ಲಿ ಭಕ್ತಿಪರವಶಳಾಗಿ ಹಾಡುತ್ತಾಳೆ. ಆಕೆಯ ಗಾನ ಮಾಧುರ್ಯಕ್ಕೆ ಮನಸೋತ ಆ ದೇಗುಲದ ನಾದಸ್ವರ ವಾದಕ ವರದರಾಜ, ಆಕೆಯನ್ನು ದತ್ತುಪಡೆದು ಸಾಕುತ್ತಾರೆ. ತಮ್ಮ ಸಂಗೀತ ಜ್ಞಾನವನ್ನು ಧಾರೆ ಎರೆಯುತ್ತಾರೆ. ಬೆಳೆದು ದೊಡ್ಡವಳಾಗುತ್ತ ಹಿರಣ್ಮಯಿಯು ನಾದಸ್ವರ ವಾದಕಿಯಾಗಿ ಹೆಸರು ಗಳಿಸುತ್ತಾಳೆ.</p>.<p>ಹಿರಣ್ಮಯಿಯನ್ನು ಹಿಂಬಾಲಿಸಿ ಬಂದ ಆನೆಮರಿಯೂ ಅದೇ ದೇವಸ್ಥಾನದಲ್ಲಿ ಬೆಳೆದು, ಹಿರಣ್ಮಯಿಯ ಸುಖ ದುಃಖ ಹಂಚಿಕೊಳ್ಳುವ ಸ್ನೇಹಿತನಾಗಿ, ಕಾಪಾಡುವ ಸೋದರನಾಗಿ ದೇವಸ್ಥಾನದ ಆನೆಯಾಗಿ, ಹಿರಣ್ಮಯಿಯ ಜೀವನದ ಏಳುಬೀಳುಗಳಿಗೆ ಮೂಕಸಾಕ್ಷಿಯಾಗಿರುತ್ತದೆ. ಕಥೆ ಹೀಗೆ ಹೊಸ ಹೊಸ ಅಧ್ಯಾಯಗಳಲ್ಲಿ ತೆರೆದುಕೊಳ್ಳಲಿದೆಯಂತೆ.</p>.<p>ತರುಣಿ ಹಿರಣ್ಮಯಿಯ ಪಾತ್ರದಲ್ಲಿ ಹೊಸ ನಟಿ ಗಗನಾ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕ ಸೂರ್ಯನ ಪಾತ್ರದಲ್ಲಿ ವಿವೇಕ್ ಸಿಂಹ, ಸಾಕುತಂದೆ ವರದರಾಜ್ ಪಾತ್ರದಲ್ಲಿ ರಂಗನಟ ಧರ್ಮೇಂದ್ರ ಅರಸ್ ನಟಿಸುತ್ತಿದ್ದಾರೆ. ಇದಲ್ಲದೆ ದೊಡ್ಡ ತಾರಾಗಣವೇ ‘ಮಹಾದೇವಿ’ ಧಾರಾವಾಹಿಯಲ್ಲಿದೆ.</p>.<p>‘ಜೀ ಕನ್ನಡದ ಧಾರಾವಾಹಿಗಳಲ್ಲಿ ‘ಮಹಾದೇವಿ’ ತನ್ನದೇ ಛಾಪು ಮೂಡಿಸಿದೆ. ವೀಕ್ಷಕರ ಭಾವನೆಗಳನ್ನು ಅರಿತು ಹಿರಣ್ಮಯಿಯ ಕಥೆಯನ್ನು ಮುಂದುವರಿಸಲು ವಾಹಿನಿ ನಿರ್ಧರಿಸಿತು’ ಎನ್ನುತ್ತಾರೆ ಚಾನೆಲ್ನ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು.</p>.<p>‘ಮಹಾದೇವಿ ಧಾರಾವಾಹಿಯನ್ನು ಹೊಸ ರೂಪದಲ್ಲಿ ಕಟ್ಟಿಕೊಡುವುದು ಒಂದು ಸವಾಲಿನ ಕೆಲಸ. ಈ ಸವಾಲನ್ನು ಎದುರಿಸಿ ವೀಕ್ಷಕರ ಮನ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ನಿರ್ದೇಶಕ ರಮೇಶ್ ಇಂದಿರಾ. ಸೋಮವಾರದಿಂದ (ಫೆ. 4) ಶುಕ್ರವಾರದವರೆಗೆ ರಾತ್ರಿ 8:30 ಕ್ಕೆ ಹೊಸ ರೂಪದಲ್ಲಿ ‘ಮಹಾದೇವಿ’ ಪ್ರಸಾರವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>