ಇಲ್ಲಿನ ನಿಜಾಮುದ್ದಿನ್ ಮರ್ಕಜ್ನಲ್ಲಿ 2020ರ ಮಾರ್ಚ್ ತಿಂಗಳು ನಡೆದಿದ್ದ ತಬ್ಲೀಗಿ ಜಮಾತ್ನ ಸಮಾವೇಶ ಹಾಗೂ ಅದರಲ್ಲಿ ಭಾಗವಹಿಸಿದ್ದ ಸಾವಿರಾರು ಜನ ಸದಸ್ಯರೇ ದೇಶದಾದ್ಯಂತ ಕೊರೊನಾ ಸೋಂಕು ಹರಡಲು ಕಾರಣ ಎಂಬ ಧಾಟಿಯಲ್ಲಿ ಬಿಂಬಿಸಲಾದ ಸುದ್ದಿಯನ್ನು ಪ್ರಸಾರ ಮಾಡಿರುವ ಕನ್ನಡದ ‘ನ್ಯೂಸ್–18’ ಸುದ್ದಿ ವಾಹಿನಿಗೆ ₹ 1 ಲಕ್ಷ, ‘ಸುವರ್ಣ ನ್ಯೂಸ್’ ವಾಹಿನಿಗೆ ₹ 50,000 ದಂಡ ವಿಧಿಸಲಾಗಿದೆ.