<p>ಕಿರುತೆರೆಯ ಜನಪ್ರಿಯ ನೆಚ್ಚಿನ 'ಕಲರ್ಸ್ ಕನ್ನಡ' ವಾಹಿನಿಯು ಎರಡು ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಲು ಸಜ್ಜಾಗಿದೆ.</p><p>ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ರಾಮಚಾರಿ, ಗಿಚ್ಚಿ ಗಿಲಿ ಗಿಲಿ, ರಾಜಾ ರಾಣಿ, ನನ್ನಮ್ಮ ಸೂಪರ್ಸ್ಟಾರ್ ಮತ್ತು ಬಿಗ್ ಬಾಸ್ನಂತಹ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿರುವ ಕಲರ್ಸ್ನಲ್ಲಿ, 'ವಧು' ಹಾಗೂ 'ಯಜಮಾನ' ಹೆಸರಿನ ಧಾರಾವಾಹಿಗಳು ಜನವರಿ 27ರಿಂದ ಆರಂಭವಾಗಲಿವೆ.</p><p>ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿರುವ ಈ ಧಾರಾವಾಹಿಗಳನ್ನು ನಟಿಯರಾದ ಶ್ರುತಿ ಹಾಗೂ ಸಪ್ತಮಿ ಗೌಡ ವೀಕ್ಷಕರಿಗೆ ಪರಿಚಯಿಸಿದ್ದಾರೆ.</p><p><strong>ವಧು<br></strong>ವಿಚ್ಛೇದನ ಕೋರಿ ಬರುವ ಜೋಡಿಗಳ ನಡುವೆ ಸಾಮರಸ್ಯ ಮೂಡಿಸಿ, ಒಂದಾಗಿ ಬಾಳುವಂತೆ ಮಾಡುವ ವಕೀಲೆ ನಾಯಕಿ 'ವಧು'. ಮನುಷ್ಯ ಸಂಬಂಧಗಳ ಬಗ್ಗೆ ಹೊಂದಿರುವ ಅಪಾರ ಗೌರವದ ಕಾರಣಕ್ಕೆ, ವೃತ್ತಿಯಲ್ಲಿ ಹಿಂದುಳಿದಿರುವ ಆಕೆ ಅವಿವಾಹಿತೆಯೂ ಹೌದು. ಮದುವೆಯಾಗುವ ಆಲೋಚನೆಯಲ್ಲಿದ್ದಾಳೆ.</p><p>ಯಶಸ್ವಿ ಉದ್ಯಮಿಯೊಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿ, ವಧು ಬಳಿಗೆ ನೆರವು ಕೋರಿ ಬಂದಾಗ, ಕಥೆ ತಿರುವು ಪಡೆದುಕೊಳ್ಳುತ್ತದೆ. ಪ್ರೀತಿ ಮತ್ತು ಬದ್ಧತೆಗಳ ಕುರಿತ ಅವಳ ನಿಲುವುಗಳು ಈ ಕೇಸ್ನ ನಂತರ ಬದಲಾಗುತ್ತವೆಯೇ ಎಂಬುದಕ್ಕೆ ಉತ್ತರ ಪ್ರತಿದಿನದ ಸಂಚಿಕೆಗಳಲ್ಲಿ ಇದೆ. ಸಂಬಂಧಗಳನ್ನು ಪರೀಕ್ಷೆಗೆ ಒಡ್ಡುತ್ತಾ, ವೃತ್ತಿಧರ್ಮ ಮತ್ತು ಆತ್ಮಸಾಕ್ಷಿಗಳ ನಡುವಿನ ತಿಕ್ಕಾಟದೊಂದಿಗೆ ಸಾಗುವ 'ವಧು' ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.</p><p>'ವಧು' ಪಾತ್ರದಲ್ಲಿ ದುರ್ಗಾಶ್ರೀ ನಟಿಸಿದ್ದಾರೆ. ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್ ಮತ್ತು ರೇಖಾ ಸಾಗರ್ ಸೇರಿದಂತೆ ಇನ್ನಷ್ಟು ಮಂದಿ ತಾರಾಗಣದಲ್ಲಿದ್ದಾರೆ.</p>.<p><strong>ಯಜಮಾನ<br></strong>ಚೂರೂ ಸ್ವಾರ್ಥವಿಲ್ಲದ, ಕುಟುಂಬದವರ ಪ್ರೀತಿ ಗಳಿಸುವ ಮಹದಾಸೆ ಹೊಂದಿರುವ ರಘು ಹಾಗೂ ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ ಝಾನ್ಸಿ, 'ಯಜಮಾನ' ಧಾರಾವಾಹಿಯ ನಾಯಕ–ನಾಯಕಿ. ವಿಧಿ ಇವರನ್ನು ಕಾಂಟ್ರ್ಯಾಕ್ಟ್ ಮದುವೆ ರೂಪದಲ್ಲಿ ಹತ್ತಿರ ಮಾಡುತ್ತದೆ.</p><p>ಕಷ್ಟದಲ್ಲಿರುವ ತನ್ನ ಕುಟುಂಬಕ್ಕೆ ಒಳಿತಾಗಲೆಂದು ರಘು ಮದುವೆಗೆ ಒಪ್ಪುತ್ತಾನೆ. ಮದುವೆಯ ನಂತರ ಎದುರಾಗುವ ತಿರುವುಗಳು ವೀಕ್ಷಕರ ಕುತೂಹಲ ಕೆರಳಿಸುತ್ತವೆ.</p><p>ಪರಸ್ಪರ ಅನುಕೂಲಕ್ಕಾಗಿ ಆರಂಭವಾದ ರಘು–ಝಾನ್ಸಿ ಸಂಬಂಧ, ಗಾಢವಾಗುತ್ತಾ ಸಾಗಿದರೂ ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಆತಂಕ ಇದ್ದದ್ದೇ. ಹೀಗಾಗಿ, ಪ್ರೀತಿ, ಮಹತ್ವಾಕಾಂಕ್ಷೆ ಮತ್ತು ಸ್ವಾರ್ಥದ ಆಟಗಳೊಂದಿಗೆ 'ಯಜಮಾನ' ಹೇಗೆ ಸಾಗುತ್ತದೆ, ನಾಯಕ–ನಾಯಕಿ ಒಂದಾಗುವರೇ ಎಂಬುದನ್ನು ವಾಹಿನಿಯಲ್ಲೇ ವೀಕ್ಷಿಸಬೇಕು. ಈ ಧಾರಾವಾಹಿ ರಾತ್ರಿ 10ಕ್ಕೆ ಪ್ರಸಾರವಾಗಲಿದೆ.</p><p>ಹರ್ಷ ಬಿ. ಎಸ್. ಮತ್ತು ಮಧುಶ್ರೀ ಭೈರಪ್ಪ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಫೂರ್ತಿ, ಪ್ರದೀಪ್ ಮತ್ತು ವಿಶ್ವ ಅವರೂ ಅಭಿನಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಿರುತೆರೆಯ ಜನಪ್ರಿಯ ನೆಚ್ಚಿನ 'ಕಲರ್ಸ್ ಕನ್ನಡ' ವಾಹಿನಿಯು ಎರಡು ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಲು ಸಜ್ಜಾಗಿದೆ.</p><p>ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ರಾಮಚಾರಿ, ಗಿಚ್ಚಿ ಗಿಲಿ ಗಿಲಿ, ರಾಜಾ ರಾಣಿ, ನನ್ನಮ್ಮ ಸೂಪರ್ಸ್ಟಾರ್ ಮತ್ತು ಬಿಗ್ ಬಾಸ್ನಂತಹ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿರುವ ಕಲರ್ಸ್ನಲ್ಲಿ, 'ವಧು' ಹಾಗೂ 'ಯಜಮಾನ' ಹೆಸರಿನ ಧಾರಾವಾಹಿಗಳು ಜನವರಿ 27ರಿಂದ ಆರಂಭವಾಗಲಿವೆ.</p><p>ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿರುವ ಈ ಧಾರಾವಾಹಿಗಳನ್ನು ನಟಿಯರಾದ ಶ್ರುತಿ ಹಾಗೂ ಸಪ್ತಮಿ ಗೌಡ ವೀಕ್ಷಕರಿಗೆ ಪರಿಚಯಿಸಿದ್ದಾರೆ.</p><p><strong>ವಧು<br></strong>ವಿಚ್ಛೇದನ ಕೋರಿ ಬರುವ ಜೋಡಿಗಳ ನಡುವೆ ಸಾಮರಸ್ಯ ಮೂಡಿಸಿ, ಒಂದಾಗಿ ಬಾಳುವಂತೆ ಮಾಡುವ ವಕೀಲೆ ನಾಯಕಿ 'ವಧು'. ಮನುಷ್ಯ ಸಂಬಂಧಗಳ ಬಗ್ಗೆ ಹೊಂದಿರುವ ಅಪಾರ ಗೌರವದ ಕಾರಣಕ್ಕೆ, ವೃತ್ತಿಯಲ್ಲಿ ಹಿಂದುಳಿದಿರುವ ಆಕೆ ಅವಿವಾಹಿತೆಯೂ ಹೌದು. ಮದುವೆಯಾಗುವ ಆಲೋಚನೆಯಲ್ಲಿದ್ದಾಳೆ.</p><p>ಯಶಸ್ವಿ ಉದ್ಯಮಿಯೊಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿ, ವಧು ಬಳಿಗೆ ನೆರವು ಕೋರಿ ಬಂದಾಗ, ಕಥೆ ತಿರುವು ಪಡೆದುಕೊಳ್ಳುತ್ತದೆ. ಪ್ರೀತಿ ಮತ್ತು ಬದ್ಧತೆಗಳ ಕುರಿತ ಅವಳ ನಿಲುವುಗಳು ಈ ಕೇಸ್ನ ನಂತರ ಬದಲಾಗುತ್ತವೆಯೇ ಎಂಬುದಕ್ಕೆ ಉತ್ತರ ಪ್ರತಿದಿನದ ಸಂಚಿಕೆಗಳಲ್ಲಿ ಇದೆ. ಸಂಬಂಧಗಳನ್ನು ಪರೀಕ್ಷೆಗೆ ಒಡ್ಡುತ್ತಾ, ವೃತ್ತಿಧರ್ಮ ಮತ್ತು ಆತ್ಮಸಾಕ್ಷಿಗಳ ನಡುವಿನ ತಿಕ್ಕಾಟದೊಂದಿಗೆ ಸಾಗುವ 'ವಧು' ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.</p><p>'ವಧು' ಪಾತ್ರದಲ್ಲಿ ದುರ್ಗಾಶ್ರೀ ನಟಿಸಿದ್ದಾರೆ. ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್ ಮತ್ತು ರೇಖಾ ಸಾಗರ್ ಸೇರಿದಂತೆ ಇನ್ನಷ್ಟು ಮಂದಿ ತಾರಾಗಣದಲ್ಲಿದ್ದಾರೆ.</p>.<p><strong>ಯಜಮಾನ<br></strong>ಚೂರೂ ಸ್ವಾರ್ಥವಿಲ್ಲದ, ಕುಟುಂಬದವರ ಪ್ರೀತಿ ಗಳಿಸುವ ಮಹದಾಸೆ ಹೊಂದಿರುವ ರಘು ಹಾಗೂ ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ ಝಾನ್ಸಿ, 'ಯಜಮಾನ' ಧಾರಾವಾಹಿಯ ನಾಯಕ–ನಾಯಕಿ. ವಿಧಿ ಇವರನ್ನು ಕಾಂಟ್ರ್ಯಾಕ್ಟ್ ಮದುವೆ ರೂಪದಲ್ಲಿ ಹತ್ತಿರ ಮಾಡುತ್ತದೆ.</p><p>ಕಷ್ಟದಲ್ಲಿರುವ ತನ್ನ ಕುಟುಂಬಕ್ಕೆ ಒಳಿತಾಗಲೆಂದು ರಘು ಮದುವೆಗೆ ಒಪ್ಪುತ್ತಾನೆ. ಮದುವೆಯ ನಂತರ ಎದುರಾಗುವ ತಿರುವುಗಳು ವೀಕ್ಷಕರ ಕುತೂಹಲ ಕೆರಳಿಸುತ್ತವೆ.</p><p>ಪರಸ್ಪರ ಅನುಕೂಲಕ್ಕಾಗಿ ಆರಂಭವಾದ ರಘು–ಝಾನ್ಸಿ ಸಂಬಂಧ, ಗಾಢವಾಗುತ್ತಾ ಸಾಗಿದರೂ ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಆತಂಕ ಇದ್ದದ್ದೇ. ಹೀಗಾಗಿ, ಪ್ರೀತಿ, ಮಹತ್ವಾಕಾಂಕ್ಷೆ ಮತ್ತು ಸ್ವಾರ್ಥದ ಆಟಗಳೊಂದಿಗೆ 'ಯಜಮಾನ' ಹೇಗೆ ಸಾಗುತ್ತದೆ, ನಾಯಕ–ನಾಯಕಿ ಒಂದಾಗುವರೇ ಎಂಬುದನ್ನು ವಾಹಿನಿಯಲ್ಲೇ ವೀಕ್ಷಿಸಬೇಕು. ಈ ಧಾರಾವಾಹಿ ರಾತ್ರಿ 10ಕ್ಕೆ ಪ್ರಸಾರವಾಗಲಿದೆ.</p><p>ಹರ್ಷ ಬಿ. ಎಸ್. ಮತ್ತು ಮಧುಶ್ರೀ ಭೈರಪ್ಪ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಫೂರ್ತಿ, ಪ್ರದೀಪ್ ಮತ್ತು ವಿಶ್ವ ಅವರೂ ಅಭಿನಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>