ಬೆಂಗಳೂರಿನ ಮಾಗಡಿ ರಸ್ತೆಯ ಬಾಲಗಂಗಾಧರ ವೃತ್ತದಲ್ಲಿ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಪ್ರತಿಮ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಈ ಮೊದಲು ಇದ್ದ ಪ್ರತಿಮೆಗಿಂತ 15ಮೀಟರ್ ದೂರದಲ್ಲಿ ಹೊಸ ಪ್ರತಿಮೆಯ ನಿರ್ಮಾಣ ಆಗಲಿದೆ. ಹೊಸದಾಗಿ ನಿರ್ಮಾಣವಾಗಲಿರುವ ಪ್ರತಿಮೆ ಆರು ಅಡಿ ಉದ್ದ ಇರಲಿದ್ದು, ನಿಂತಿರುವ ಭಂಗಿಯಲ್ಲಿ ವಿಷ್ಣು ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ.