<p>ವಾವ್ ಅನಾನಸ್ ಹಣ್ಣು; ಮನುಷ್ಯ ಎಷ್ಟು ಒಳ್ಳೆಯವನು ನಮಗೆ ಹಣ್ಣು ನೀಡಿದ್ದಾನೆ... ಅಮ್ಮ ಎದ್ದೇಳು, ನನಗೆ ಉಸಿರಾಡಲು ಆಗುತ್ತಿಲ್ಲ... ಅಮ್ಮ ಈ ಪ್ರಪಂಚವನ್ನು ನಾನು ನೋಡುವುದಿಲ್ಲವಾ?...</p>.<p>ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸ್ಫೋಟಕ ತುಂಬಿದ ಅನಾನಸ್ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ ಸುದ್ದಿ ಪ್ರಕಟಗೊಂಡ ನಂತರ, ಆನೆ ಮತ್ತು ಅದರ ಮಗು ಮಾತನಾಡಿಕೊಳ್ಳುವಇಂಥ ಹತ್ತಾರುಮನಮಿಡಿಯುವ ಕ್ಯಾರಿಕೇಚರ್ಗಳು ಟ್ವೀಟರ್ನಲ್ಲಿ ಟ್ರೆಂಡ್ ಆಗಿವೆ.</p>.<p>ಪ್ರಕರಣವನ್ನು ನೋವಿನಿಂದ ಖಂಡಿಸುತ್ತಿರುವ ಜನರು#AllLivesMatter ಹಾಗೂ#humanityisdead ಹ್ಯಾಶ್ಟ್ಯಾಗ್ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದಲ್ಲಿ ಬಾಲಿವುಡ್ ನಟರು ಕೈಜೋಡಿಸಿದ್ದಾರೆ.ಸ್ಯಾಂಡಲ್ವುಡ್ನ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಕೂಡ ತಮ್ಮ ಟ್ವೀಟರ್ ಖಾತೆಯಲ್ಲಿ ದುಗುಡ, ಕೋಪ ಹೊರಹಾಕಿದ್ದಾರೆ.</p>.<p>ಈ ಘಟನೆ ಬಗ್ಗೆ ತಿಳಿದು ಅಘಾತಕೊಂಡ ನಟಿ ಅನುಷ್ಕಾ, ತಮ್ಮ ಟ್ವಿಟರ್ ಖಾತೆಯಲ್ಲಿ ಆನೆಯ ಸಾವಿನ ಸುದ್ದಿಯ ಕ್ಯಾರಿಕೇಚರ್ಶೇರ್ ಮಾಡಿ ‘ಇದಕ್ಕಾಗಿಯೇ ನಮಗೆ ಪ್ರಾಣಿಗಳ ಕ್ರೌರ್ಯದ ವಿರುದ್ಧ ಕಠಿಣ ಕಾನೂನಗಳು ಬೇಕಾಗುತ್ತವೆ‘ ಎಂದು ಬರೆದುಕೊಂಡಿದ್ದಾರೆ.</p>.<p>ಆನೆಯ ಸಾವಿನ ಸುದ್ದಿಯ ಬಗ್ಗೆ ಕೋಪಗೊಂಡ ಆಲಿಯಾ ಕ್ಯಾರಿಕೇಚರ್ ಶೇರ್ ಮಾಡಿ ‘ಭಯಾನಕ ಇದೂ ಭಯಾನಕ, ನಾವು ಅವುಗಳ ಧ್ವನಿ ಮತ್ತು ಸಹಬಾಳ್ವೆಯಾಗಿರಬೇಕು. ಇದು ಹೃದಯ ವಿದ್ರಾವಕವಾಗಿದೆ‘ ಎಂದಿದ್ದಾರೆ.</p>.<p>ನಟಿ ಶ್ರದ್ಧಾ ಕಪೂರ್ ಸಹ ಆನೆಯ ಕಾರ್ಟೂನ್ ಫೋಟೊ ಶೇರ್ ಮಾಡಿ, ಬೇಸರ ವ್ಯಕ್ತಪಡಿಸಿದ್ದಾರೆ.ನಟಿ ವರಲಕ್ಷ್ಮಿ ಶರತ್ ಕುಮಾರ್, ’ಇವರು ರಾಕ್ಷಸರು, ಕೊರೊನಾ ಈ ರಾಕ್ಷಸರನ್ನು ಬಲಿಪಡೆಯುತ್ತೆ. ಅವರು ಖಂಡಿತಾ ಸಾಯುತ್ತಾರೆ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಾವ್ ಅನಾನಸ್ ಹಣ್ಣು; ಮನುಷ್ಯ ಎಷ್ಟು ಒಳ್ಳೆಯವನು ನಮಗೆ ಹಣ್ಣು ನೀಡಿದ್ದಾನೆ... ಅಮ್ಮ ಎದ್ದೇಳು, ನನಗೆ ಉಸಿರಾಡಲು ಆಗುತ್ತಿಲ್ಲ... ಅಮ್ಮ ಈ ಪ್ರಪಂಚವನ್ನು ನಾನು ನೋಡುವುದಿಲ್ಲವಾ?...</p>.<p>ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸ್ಫೋಟಕ ತುಂಬಿದ ಅನಾನಸ್ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ ಸುದ್ದಿ ಪ್ರಕಟಗೊಂಡ ನಂತರ, ಆನೆ ಮತ್ತು ಅದರ ಮಗು ಮಾತನಾಡಿಕೊಳ್ಳುವಇಂಥ ಹತ್ತಾರುಮನಮಿಡಿಯುವ ಕ್ಯಾರಿಕೇಚರ್ಗಳು ಟ್ವೀಟರ್ನಲ್ಲಿ ಟ್ರೆಂಡ್ ಆಗಿವೆ.</p>.<p>ಪ್ರಕರಣವನ್ನು ನೋವಿನಿಂದ ಖಂಡಿಸುತ್ತಿರುವ ಜನರು#AllLivesMatter ಹಾಗೂ#humanityisdead ಹ್ಯಾಶ್ಟ್ಯಾಗ್ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದಲ್ಲಿ ಬಾಲಿವುಡ್ ನಟರು ಕೈಜೋಡಿಸಿದ್ದಾರೆ.ಸ್ಯಾಂಡಲ್ವುಡ್ನ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಕೂಡ ತಮ್ಮ ಟ್ವೀಟರ್ ಖಾತೆಯಲ್ಲಿ ದುಗುಡ, ಕೋಪ ಹೊರಹಾಕಿದ್ದಾರೆ.</p>.<p>ಈ ಘಟನೆ ಬಗ್ಗೆ ತಿಳಿದು ಅಘಾತಕೊಂಡ ನಟಿ ಅನುಷ್ಕಾ, ತಮ್ಮ ಟ್ವಿಟರ್ ಖಾತೆಯಲ್ಲಿ ಆನೆಯ ಸಾವಿನ ಸುದ್ದಿಯ ಕ್ಯಾರಿಕೇಚರ್ಶೇರ್ ಮಾಡಿ ‘ಇದಕ್ಕಾಗಿಯೇ ನಮಗೆ ಪ್ರಾಣಿಗಳ ಕ್ರೌರ್ಯದ ವಿರುದ್ಧ ಕಠಿಣ ಕಾನೂನಗಳು ಬೇಕಾಗುತ್ತವೆ‘ ಎಂದು ಬರೆದುಕೊಂಡಿದ್ದಾರೆ.</p>.<p>ಆನೆಯ ಸಾವಿನ ಸುದ್ದಿಯ ಬಗ್ಗೆ ಕೋಪಗೊಂಡ ಆಲಿಯಾ ಕ್ಯಾರಿಕೇಚರ್ ಶೇರ್ ಮಾಡಿ ‘ಭಯಾನಕ ಇದೂ ಭಯಾನಕ, ನಾವು ಅವುಗಳ ಧ್ವನಿ ಮತ್ತು ಸಹಬಾಳ್ವೆಯಾಗಿರಬೇಕು. ಇದು ಹೃದಯ ವಿದ್ರಾವಕವಾಗಿದೆ‘ ಎಂದಿದ್ದಾರೆ.</p>.<p>ನಟಿ ಶ್ರದ್ಧಾ ಕಪೂರ್ ಸಹ ಆನೆಯ ಕಾರ್ಟೂನ್ ಫೋಟೊ ಶೇರ್ ಮಾಡಿ, ಬೇಸರ ವ್ಯಕ್ತಪಡಿಸಿದ್ದಾರೆ.ನಟಿ ವರಲಕ್ಷ್ಮಿ ಶರತ್ ಕುಮಾರ್, ’ಇವರು ರಾಕ್ಷಸರು, ಕೊರೊನಾ ಈ ರಾಕ್ಷಸರನ್ನು ಬಲಿಪಡೆಯುತ್ತೆ. ಅವರು ಖಂಡಿತಾ ಸಾಯುತ್ತಾರೆ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>