ಮಲಾರಪಾಳ್ಯ ಗ್ರಾಮದ ಲಾರ್ಡ್ ಶಿವ ಪುರುಷರ ಸ್ವಸಹಾಯ ಸಂಘದ ಸದಸ್ಯರು, ಪರಿಸರ ಪ್ರಿಯರು, ಯುವಕರು ಬಿಡುವಿನ ವೇಳೆಯಲ್ಲಿ ನೆಟ್ಟ ಸಸಿಗಳು ಒಂದೆರಡು ವರ್ಷಗಳಲ್ಲಿ ಆಳೆತ್ತರ ಬೆಳೆದು ನಿಂತಿವೆ. ಬಿಸಿಲಿನ ಬೇಗೆಯಲ್ಲಿ ದೇಗುಲಕ್ಕೆ ತೆರಳುವ ಜನರಿಗೆ ನೆರಳು ಮತ್ತು ಪ್ರಾಣವಾಯು ನೀಡುವ ಧಾವಂತದಲ್ಲಿ ಬೆಳೆಯುತ್ತಲೇ ಇವೆ. ಹೊಂಗೆ, ಅರಳಿ, ನೇರಳೆ, ಮಹಾಗನಿ, ನೆಲ್ಲಿ ಹಾಗೂ ಸುಗಂಧ ಸೂಸುವ ಸಂಪಿಗೆ ಸಸಿಗಳನ್ನು ಇಲ್ಲಿ ನಾಟಿ ಮಾಡಲಾಗಿದೆ.