ರಾಷ್ಟ್ರೀಯ ವೈದ್ಯರ ದಿನ ಇಂದು. ರೋಗಗಳಿಗೆ ಚಿಕಿತ್ಸೆ ನೀಡುತ್ತಾ, ರೋಗಿಗಳ ನೋವನ್ನು ದೂರ ಮಾಡುವ ವೈದ್ಯರು ಮತ್ತು ಅವರ ಸೇವೆಗೆ ಅಭಿನಂದನೆ ಸಲ್ಲಿಸಲು ಇದೊಂದು ಅವಕಾಶ. ವೈದ್ಯರಾಗಿದ್ದುಕೊಂಡು ಜನಸೇವೆಯ ಜತೆಗೆ, ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದ ಡಾ.ಬಿ.ಸಿ.ರಾಯ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿದ್ದರು. ವೈದ್ಯರಾಗಿದ್ದುಕೊಂಡು ಅವರು ಮಾಡಿದ ಜನಸೇವೆಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಜನ್ಮದಿನವಾದ ಜುಲೈ 1 ಅನ್ನು ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಇದು 32ನೇ ರಾಷ್ಟ್ರೀಯ ವೈದ್ಯರ ದಿನ. ರಾಜ್ಯದ ಯಾವುದೋ ಒಂದೆಡೆ ಜನಸೇವೆಯಲ್ಲಿ ತೊಡಗಿದ ವೈದ್ಯರು ಈ ನೆಪದಲ್ಲಿ ತಮ್ಮ ವೃತ್ತಿಬದುಕಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಕಾದಂಬರಿಕಾರ ಕುಂ ವೀರಭದ್ರಪ್ಪ (ಕುಂವೀ) ಅವರು ತಮ್ಮ ನೆಚ್ಚಿನ ವೈದ್ಯನನ್ನು ನೆನಪಿಸಿಕೊಂಡಿದ್ದಾರೆ