ಉತ್ತರ ಪ್ರದೇಶದ ಯುವ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಅವರು ರೇಬಿಸ್ ಕಾಯಿಲೆಯಿಂದ ನರಳಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಹಲವು ದಿನ ನರಳಿದ ಅವರು, ನಂತರ ಉಸಿರು ಚೆಲ್ಲಿದರು. ಕರ್ನಾಟಕದಲ್ಲೂ ಈ ವರ್ಷದ ಮೊದಲ ಆರು ತಿಂಗಳಲ್ಲಿ 19 ಮಂದಿ ರೇಬಿಸ್ಗೆ ಬಲಿಯಾಗಿದ್ದಾರೆ. ನೆರೆಯ ಕೇರಳದಲ್ಲೂ ರೇಬಿಸ್ನಿಂದ ಜನರು ಸಾಯುವುದು ಹೆಚ್ಚುತ್ತಿದ್ದು, ಇತ್ತೀಚಿನ ತಿಂಗಳಲ್ಲಿ ಮೂವರು ಮಕ್ಕಳು ಇದರಿಂದಾಗಿ ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರವು 2030ರ ಒಳಗಾಗಿ ದೇಶವನ್ನು ರೇಬಿಸ್ಮುಕ್ತಗೊಳಿಸುವ ಯೋಜನೆ ಹಾಕಿಕೊಂಡಿದೆ. ಹಾಗಿದ್ದರೂ ವರ್ಷದಿಂದ ವರ್ಷಕ್ಕೆ ರೇಬಿಸ್ ಸಾವುಗಳು ಹೆಚ್ಚುತ್ತಿವೆ. ರೇಬಿಸ್ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತೆಗಳು, ತಜ್ಞರ ಸಲಹೆಗಳು ಇಲ್ಲಿವೆ