ಕಾಸರಗೋಡು ಸಮೀಪದ ಚೆರುವತೂರ್ನ ಕಡಕ್ಕೊಟ್ಟೆಯಲ್ಲಿ ಬೆಳಿಗ್ಗೆ 11.04ಕ್ಕೆ ಸೂರ್ಯಗ್ರಹಣ ಮುಕ್ತಾಯವಾಯಿತು. ಬೆಳಿಗ್ಗೆ 08.04ಕ್ಕೆ ಗ್ರಹಣ ಸ್ಪರ್ಶವಾಗಿತ್ತು.
ಕೈಗೆ ಮೇಲೆ ಸೂರ್ಯ...
ಮಂಡ್ಯ ಜಿಲ್ಲೆ ದ್ಯಾಪಸಂದ್ರ ಗ್ರಾಮದ ಶಂಕರೇಗೌಡರು ತಮ್ಮ ಮನೆಯ ಹೆಂಚಿನ ಕಿಂಡಿಯ ಮೂಲಕ ಸೂರ್ಯನ ಪ್ರತಿಬಿಂಬ ಸೆರೆ ಹಿಡಿದಿದ್ದಾರೆ.
ಕಾಸರಗೋಡು ಸಮೀಪದ ಚೆರುವತೂರ್ನ ಕಡಕ್ಕೊಟ್ಟೆಯಲ್ಲಿ ಸೂರ್ಯಗ್ರಹಣ ಮೋಕ್ಷಕ್ಕೂ ಮುನ್ನ 10.41ಕ್ಕೆ ಕಂಡುಬಂದ ದೃಶ್ಯ. (ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ)
ಬೆಳಗಾವಿ: ಹಳ್ಳಿಗಳಲ್ಲಿ ಸೂರ್ಯ ಗ್ರಹಣ ಕಂಡು ಹಿಡಿಯುವ ಕಲೆ ಇದು. ಗ್ರಹಣ ಇದ್ದ ಸಮಯದಲ್ಲಿ ಮಾತ್ರ ಈ ಒನಕೆ ನಿಲ್ಲುತ್ತದೆ. ಗ್ರಹಣ ಬಿಟ್ಟ ನಂತರ ಈ ಒನಕೆ ತಾನಾಗಿಯೇ ಬೀಳುತ್ತದೆ ಎಂಬ ನಂಬಿಕೆ ಇದೆ.
ತ್ರಾಮದ ಅಥವಾ ಇತರ ತಟ್ಟೆಯಲ್ಲಿ ನೀರು ಹಾಕಿ ಒನಕೆ ನಿಲ್ಲಿಸುವುದು ರಾಮದುರ್ಗ ತಾಲ್ಲೂಕು ಕಟಕೋಳ, ರಾಯಬಾಗ ತಾಲ್ಲೂಕಿನ ಮುಗಳಖೋಡ ಮೊದಲಾದ ಕಡೆಗಳಲ್ಲಿ ಕಂಡುಬಂತು.
ಬೆಳಗಾವಿಯ ಕುಲಕರ್ಣಿ ಬೀದಿಯಲ್ಲಿ ಒನಕೆ ನಿಲ್ಲಿಸಲಾಗಿದೆ.
ದಾವಣಗೆರೆ: ಮೌನೇಶ್ವರ ಲೇಔಟ್ ನ ವಿಶ್ವನಾಥ್ ಸೂರ್ಯಗ್ರಹಣ ದಿನವೇ ಜನುಮದಿನವನ್ನು ಕೇಕ್ ಕತ್ತರಿಸಿ ಸ್ನೇಹಿತರಿಗೆ ತಿನ್ನಿಸಿ ಆಚರಿಕೊಂಡಿದ್ದಾನೆ.
ನಿಟುವಳ್ಳಿ ನಿಂಚನ ಸ್ಕೂಲ್ ನ 8ನೇ ತರಗತಿಯ ವಿದ್ಯಾರ್ಥಿ ಯಾಗಿರವ ವಿಶ್ವನಾಥ ಈ ಮೂಲಕ ವೈಚಾರಿಕತೆ ಸಾರಿದರು.
ಮಂಗಳೂರು: ಉಳ್ಳಾಲ ಕಾಪಿಕಾಡಿನ ಉಮಾಪುರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಸೂರ್ಯಗ್ರಹಣದ ಅಂಗವಾಗಿ ಗ್ರಹಣದೋಷ ನಿವಾರಣೆಗೆ ಗ್ರಹಣ ಶಾಂತಿ ಹೋಮ ನಡೆಯಿತು.
ಮಂಗಳೂರು: ಸೂರ್ಯಗ್ರಹಣ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ನಮಾಜ್ ಮಾಡಲಾಯಿತು.
ನಗರ ಬಂದರು ಕೇಂದ್ರ ಜುಮಾ ಮಸೀದಿಯಲ್ಲಿ ಬೆಳಿಗ್ಗೆ 9ಕ್ಕೆ ನಡೆದ ನಮಾಜ್ಗೆ ಖತೀಬ್ ಸ್ವದಕತುಲ್ಲಾಹ್ ಫೈಝಿ ನೇತೃತ್ವ ನೀಡಿದರು.
ಉಳಿದಂತೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಮಸೀದಿಗಳಲ್ಲಿ ವಿಶೇಷ ನಮಾಜ್ ಮಾಡಲಾಯಿತು.
ಕೊಡಗಿನಲ್ಲಿ ಸೂರ್ಯನಿಗೆ ಕಂಕಣ (ಪ್ರಜಾವಾಣಿ ಚಿತ್ರಗಳು: ರಂಗಸ್ವಾಮಿ)