‘ಟ್ರೋಫಿ ಘೋಷಣೆಗೆ ಈಗ ಅವಕಾಶವಿಲ್ಲ’
‘2002ರಲ್ಲಿ ವನ್ಯಜೀವಿ (ರಕ್ಷಣಾ) ತಿದ್ದುಪಡಿ ಅಧಿನಿಯಮ ಜಾರಿಗೊಂಡಿತು. ಇದರ ಆಧಾರದ ಮೇಲೆಯೇ 2003ರಲ್ಲಿ ವನ್ಯಜೀವಿ ಟ್ರೋಫಿಗಳ ಘೋಷಣೆಗೆ 180 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈಗ ಘೋಷಿಸಿಕೊಳ್ಳಲು ಸಾಧ್ಯವಿಲ್ಲ. ಟ್ರೋಫಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸಲು ಸರ್ಕಾರದ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ’ ಎಂದು ರಾಜ್ಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ತಿಳಿಸಿದರು. ‘ಕಾಯ್ದೆಯಡಿ ಮತ್ತೆ ಟ್ರೋಫಿಗಳ ಘೋಷಣೆಗೆ ಅವಕಾಶ ಕಲ್ಪಿಸಲು ಸಾಧ್ಯ ಇದೆಯೇ ಎಂಬ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲು ಸರ್ಕಾರದ ಮಟ್ಟದಲ್ಲಿ ನಿರ್ಧರಿಸಲಾಗಿದೆ’ ಎಂಬುದು ಅವರ ವಿವರಣೆ.