ಶುಕ್ರವಾರ, 4 ಜುಲೈ 2025
×
ADVERTISEMENT
ಒಳನೋಟ | ಕಾನೂನಿದೆ; ರಕ್ಷಣೆ ಇಲ್ಲ!
ಒಳನೋಟ | ಕಾನೂನಿದೆ; ರಕ್ಷಣೆ ಇಲ್ಲ!
ಜನರ ಶೋಕಿಗಾಗಿ ಅಪಾಯ ಎದುರಿಸುತ್ತಿರುವ ಕಾಡುಪ್ರಾಣಿಗಳು
ಫಾಲೋ ಮಾಡಿ
Published 4 ನವೆಂಬರ್ 2023, 20:33 IST
Last Updated 4 ನವೆಂಬರ್ 2023, 20:33 IST
Comments
ವನ್ಯಜೀವಿ ಕಾಯ್ದೆಯ ಯಶಸ್ವಿ ಅನುಷ್ಠಾನಕ್ಕೆ ತಳಮಟ್ಟದಲ್ಲಿ ವನ್ಯಜೀವಿ ತಜ್ಞರ ಕೊರತೆ ಇದೆ. ಜಿಲ್ಲಾಮಟ್ಟದಲ್ಲಿ ವನ್ಯಜೀವಿ ಅಪರಾಧ ತಡೆ ದಳ ರಚಿಸಬೇಕು.
ಕೇಶವ ಎಚ್‌. ಕೊರ್ಸೆ, ಪರಿಸರ ತಜ್ಞ
ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ ಮಾಫಿಯಾ ಸಕ್ರಿಯವಾಗಿದೆ. ಈ ಬಗ್ಗೆ ಗುಪ್ತಚರ ವಿಭಾಗದವರು ಹೆಚ್ಚು ಜಾಗ್ರತೆವಹಿಸಬೇಕು.
ಕರ್ನಲ್ ಸಿ.ಪಿ. ಮುತ್ತಣ್ಣ, ಪರಿಸರವಾದಿ, ಕೊಡಗು
ಬಂಡೀಪುರದಲ್ಲಿ ವಿಶೇಷ ಹುಲಿ ಸಂರಕ್ಷಣಾ ಪಡೆ ರಚನೆಯಾದ ಬಳಿಕ ಹುಲಿಗಳ ಅಸಹಜ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಪಿ. ರಮೇಶ್‌ಕುಮಾರ್, ನಿರ್ದೇಶಕ, ಬಂಡೀಪುರ
‘ಟ್ರೋಫಿ ಘೋಷಣೆಗೆ ಈಗ ಅವಕಾಶವಿಲ್ಲ’
‘2002ರಲ್ಲಿ ವನ್ಯಜೀವಿ (ರಕ್ಷಣಾ) ತಿದ್ದುಪಡಿ ಅಧಿನಿಯಮ ಜಾರಿಗೊಂಡಿತು. ಇದರ ಆಧಾರದ ಮೇಲೆಯೇ 2003ರಲ್ಲಿ ವನ್ಯಜೀವಿ ಟ್ರೋಫಿಗಳ ಘೋಷಣೆಗೆ 180 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈಗ ಘೋಷಿಸಿಕೊಳ್ಳಲು ಸಾಧ್ಯವಿಲ್ಲ. ಟ್ರೋಫಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸಲು ಸರ್ಕಾರದ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ’ ಎಂದು ರಾಜ್ಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್‌ ಪುಷ್ಕರ್‌ ತಿಳಿಸಿದರು. ‘ಕಾಯ್ದೆಯಡಿ ಮತ್ತೆ ಟ್ರೋಫಿಗಳ ಘೋಷಣೆಗೆ ಅವಕಾಶ ಕಲ್ಪಿಸಲು ಸಾಧ್ಯ ಇದೆಯೇ ಎಂಬ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲು ಸರ್ಕಾರದ ಮಟ್ಟದಲ್ಲಿ ನಿರ್ಧರಿಸಲಾಗಿದೆ’ ಎಂಬುದು ಅವರ ವಿವರಣೆ.
ನಾಗರಹೊಳೆಯಲ್ಲಿ ಈ ವರ್ಷ ಕಾಟಿ ಬೇಟೆ ಪ್ರಕರಣ ಹೊರತುಪಡಿಸಿದರೆ ಇತರೆ ವನ್ಯಜೀವಿ ಹತ್ಯೆ ನಡೆದಿಲ್ಲ. ಅಪರಾಧದ ಮೇಲೆ ನಿಗಾ ಇಡಲಾಗಿದೆ.
ಹರ್ಷಕುಮಾರ್ ಚಿಕ್ಕನರಗುಂದ, ನಿರ್ದೇಶಕ, ನಾಗರಹೊಳೆ
ಪೂರಕ ಮಾಹಿತಿ: ಸೂರ್ಯನಾರಾಯಣ ವಿ., ಕೆ.ಎಸ್‌. ಗಿರೀಶ, ಮೋಹನ್ ಕುಮಾರ್‌, ಕೆ. ಓಂಕಾರಮೂರ್ತಿ, ಡಿ.ಎಂ. ಕುರ್ಕೆ ಪ್ರಶಾಂತ, ಗಣಪತಿ ಹೆಗಡೆ, ಬಿ.ಜೆ. ಧನ್ಯಪ್ರಸಾದ್
ಆಧಾರ: ರಾಜ್ಯ ಅರಣ್ಯ ಇಲಾಖೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT