ಕೊರೊನಾ ವೈರಸ್ ದೇಶದಾದ್ಯಂತ ರೌದ್ರರೂಪ ತಾಳಿದ್ದು, ಜನರು ರೋಸಿ ಹೋಗಿದ್ದಾರೆ. ಜನರ ಸಿಟ್ಟು ಎಷ್ಟಿದೆಯೆಂದರೆ ದೇವರ ಮೂರ್ತಿಗಳನ್ನು ರಸ್ತೆಗೆ ಎಸೆಯುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ದೇವರ ವಿಗ್ರಹಗಳನ್ನು ಚೆಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಂಬಿಸುವ ವಿಡಿಯೊ ವೈರಲ್ ಆಗಿದೆ. ಮತ್ತೊಂದು ವಿಡಿಯೊದಲ್ಲಿ ವಿಗ್ರಹಗಳನ್ನು ಜನರು ನದಿಗೆ ಎಸೆಯುತ್ತಿರುವ ದೃಶ್ಯವಿದೆ. ಸುದ್ದಿ ವಾಹಿನಿಗಳು ಈ ವಿಡಿಯೊಗಳನ್ನು ಪ್ರಸಾರ ಮಾಡಿವೆ.