ಈ ಸುದ್ದಿ ಸುಳ್ಳು ಎಂದು ಮಥುರಾ ಪೊಲೀಸರು ಟ್ವೀಟ್ ಮಾಡಿದ್ದಾರೆ. ‘ಆಸ್ತಿ ವ್ಯಾಜ್ಯದ ಕಾರಣ ಸಾಧುಗಳು ಮತ್ತು ದೇವಾಲಯದ ಟ್ರಸ್ಟಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸಾಧುಗಳು ಗಾಯಗೊಂಡಿದ್ದಾರೆ ಅಷ್ಟೆ, ಜೀವಹಾನಿ ಆಗಿಲ್ಲ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಟ್ರಸ್ಟಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಈ ಹಲ್ಲೆಯಲ್ಲಿ ಮುಸ್ಲಿಮರ ಪಾತ್ರವಿಲ್ಲ’ ಎಂದು ಟ್ವೀಟ್ನಲ್ಲಿ ವಿವರಿಸಲಾಗಿದೆ.