ಇದು ಅಸ್ಸಾಂನಲ್ಲಿ ನಡೆದ ಘಟನೆಯಲ್ಲ, ಬದಲಾಗಿ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ 2020ರ ಏಪ್ರಿಲ್ನಲ್ಲಿ ನಡೆದ ಘಟನೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿರುವಂತೆ ಇದು ಪ್ರತ್ಯೇಕ ರಾಷ್ಟ್ರಕ್ಕಾಗಿ ನಡೆದ ರ್ಯಾಲಿಯಲ್ಲ. ಮೊದಲ ಲಾಕ್ಡೌನ್ ವೇಳೆ ಪೊಲೀಸರು ಬರೇಲಿಯ ಗ್ರಾಮವೊಂದಕ್ಕೆ ತೆರಳಿ, ಕೋವಿಡ್ ನಿಯಮಗಳನ್ನು ಪಾಲಿಸಲುಜನರಿಗೆ ಹೇಳಿದ್ದರು. ಆ ವೇಳೆ ಸ್ಥಳೀಯರು ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಸ್ಥಳೀಯರ ಮೇಲೆ ಲಾಠಿ ಪ್ರಹಾರ ನಡೆಸಿದ್ದರು.