ಈ ವಿಡಿಯೊ ರಾಜಸ್ಥಾನದ ದೌಸಾಗೆ ಸಂಬಂಧಿಸಿದ್ದು ಎಂದು ಲಾಜಿಕಲ್ ಇಂಡಿಯನ್ಫ್ಯಾಕ್ಟ್ಚೆಕ್ವೇದಿಕೆ ತಿಳಿಸಿದೆ. ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಪೊಲೀಸ್ ಇಲಾಖೆ, ಇದು ರಾಜ್ಯಕ್ಕೆ ಸಂಬಂಧಿಸಿದ್ದ ವಿಡಿಯೊ ಅಲ್ಲ ಎಂದು ಸ್ಪಷ್ಟಪಡಿಸಿದೆ. ಕೊಲಾನ ಜೈಲಿನ ಕಡೆಗೆ ಹೊರಟಿದ್ದ ರಿಕ್ಷಾದ ಚಾಲಕನು ನೀರು ತುಂಬಿದ ರಸ್ತೆಯಲ್ಲೇ ವಾಹನ ಓಡಿಸಿದ್ದಾನೆ. ಆದರೆ ಗುಂಡಿ ಇದ್ದಿದ್ದರಿಂದ ರಿಕ್ಷಾ ಪಲ್ಟಿಯಾಗಿದೆ. ಅಕ್ಟೋಬರ್ 1ರಂದು ಈ ಘಟನೆ ನಡೆದಿದೆ ಎಂದು ದೈನಿಕ್ ಭಾಸ್ಕರ್, ಪಂಜಾಬ್ ಕೇಸರಿ ಮೊದಲಾದ ಮಾಧ್ಯಮಗಳು ವರದಿ ಮಾಡಿವೆ.